ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು

By Prasad
|
Google Oneindia Kannada News

Four killed as Karnataka ambulance rams bus
ಒಸ್ಮಾನಾಬಾದ್, ಫೆ. 2 : ಸಾವಿಗೀಡಾಗಿದ್ದ ವ್ಯಕ್ತಿಯನ್ನು ಸಾಗಿಸುತ್ತಿದ್ದ ಕರ್ನಾಟಕದ ಆಂಬುಲನ್ಸ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮರಣಕ್ಕೀಡಾದ ಭೀಕರ ಘಟನೆ ಗುರುವಾರ ಬೆಳಗಿನ ಜಾವ ಒಸ್ಮಾನಾಬಾದ್ ಜಿಲ್ಲೆಯ ವಡಗಾಂವ್ ಬಳಿ ನಡೆದಿದೆ.

ಸೊಲ್ಲಾಪುರ-ಒಸ್ಮಾನಾಬಾದ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಆಂಬುಲನ್ಸ್ ಔರಂಗಾಬಾದಿಗೆ ತೆರಳುತ್ತಿತ್ತು. ಅಪಘಾತದಲ್ಲಿ ಆಂಬುಲನ್ಸ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ಸು ಒಸ್ಮಾನಾಬಾದಿನಿಂದ ಸತಾರಾಗೆ ತೆರಳುತ್ತಿತ್ತು. ಈ ಘಟನೆಯಲ್ಲಿ ಬಸ್ಸಲ್ಲಿದ್ದ ಹನ್ನೊಂದಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಒಸ್ಮಾನಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

English summary
An ambulance belonging to Karnataka rams into Maharashtra state service bus on Thursday morning, killing 4 and injuring 11. The incident has happened on Sollapur-Aurangabad highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X