ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ ಪರ ತಿಪ್ಪೆಸಾರಿಸಿದ ಲೋಕಾಯುಕ್ತ ಪೊಲೀಸ್:ದತ್ತಾ

By Srinath
|
Google Oneindia Kannada News

bhadra-project-clean-chit-bsy-datta-slams-lokayukta-police
ಬೆಂಗಳೂರು, ಜ.30: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಅಕ್ರಮದಿಂದ ಮುಕ್ತಿ ದೊರೆಕಿಸುವ ನಿಟ್ಟಿನಲ್ಲಿ ಕೆಲಸ ಮಾಡಿರುವ ಬೆಂಗಳೂರು ಲೋಕಾಯುಕ್ತ ಪೊಲೀಸರು ಇಡೀ ಪ್ರಕರಣಕ್ಕೆ ತಿಪ್ಪೆ ಸಾರಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ದತ್ತಾ ವಾಗ್ಬಾಣ, ಅವರ ಮಾತುಗಳಲ್ಲೇ ಕೇಳಿ:
'ಅಲ್ಲಾ ಸ್ವಾಮಿ ನಾನು ದೂರುದಾರ. ದೂರು ದಾಖಲಾದ ದಿನದಿಂದ ಲಾಗಾಯ್ತು ಇಷ್ಟೂ ದಿನ ಒಂದೇ ಒಂದು ಬಾರಿಯೂ ನನ್ನನ್ನು ಲೋಕ ಪೊಲೀಸರು ಸಂಪರ್ಕಿಸಲಿಲ್ಲ. ಏನಪಾ ನಿನ್ನ ದೂರಿನ ವಿಚಾರ. ನಿನ್ನಲ್ಲಿರುವ ದಾಖಲೆಗಳು ಏನು? ಅಂತ ಪರಿಶೀಲಿಸುವ ಗೋಜಿಗೇ ಹೋಗಲಿಲ್ಲ'

'ಇದೆಂಥಾ ತನಿಖೆ ಸ್ವಾಮಿ ದೂರು ನೀಡಿದವರನ್ನು ಒಮ್ಮೆಯೂ ಪ್ರಶ್ನಿಸುವುದು ಬೇಡ್ವಾ. ಇದರರ್ಥ ಇಷ್ಟೆ. ಇಡೀ ಪ್ರಕರಣವನ್ನು ಹಳ್ಳ ಹಿಡಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸುವ ಹಿಂದಿನ ದಿನ ಅಂದರೆ ಜನವರಿ 29ರಂದು (ಭಾನುವಾರ) ನನಗೆ ನೋಟಿಸ್ ಕೊಡುವ ಜರೂರತ್ತಾದರೂ ಏನು?'

ಲೋಕಾಯುಕ್ತ ವಿಶೇಷ ಕೋರ್ಟಿಗೆ ಇಂದು (ಜ.30) ಬಿ ರಿಪೋರ್ಟ್ ಸಲ್ಲಿಸಿ, ಯಡಿಯೂರಪ್ಪ ಅವರು ಯಾವುದೇ ಅಕ್ರಮ ಎಸಗಿಲ್ಲ ಎಂದಿದ್ದಾರೆ. ಇದೇ ವೇಳೆ ದೂರುದಾರ ವೈಎಸ್ ವಿ ದತ್ತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

English summary
In Bhadra Upper Project case Karnataka ex Chief Minister B.S. Yeddyurappa has got a clean chit of sorts from the Lokayukta police over his role in the Upper Bhadra Irrigation Project tender process. Lokayukta sources say the Karnataka Neeravari Nigam, headed by then CM Yeddyurappa, favoured the highest bidder on expert panel’s recommendation. But petitioner YSV Datta has slamed lokayukta police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X