ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಹಿತ್ಯ ಪರಿಷತ್ ಚುನಾವಣೆಗೆ ನಟ ಅಶೋಕ್ ಸ್ಪರ್ಧೆ
ಶಿಕ್ಷಣ ಮಾಧ್ಯಮ ಹಾಗೂ ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸುವುದು ನನ್ನ ಪ್ರಥಮ ಆದ್ಯತೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಕಸಾಪ ಸದಸ್ಯರಿಗೆ ವಸತಿ ಸೌಲಭ್ಯ ಒದಗಿತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ನ್ನು ಧರ್ಮಾತೀತ ಹಾಗೂ ಜಾತ್ಯತೀತ ಸಂಸ್ಥೆಯನ್ನಾಗಿಸುತ್ತೇನೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡುತ್ತೇನೆ. ಯುವ ಸಾಹಿತಿ, ಸಂಶೋಧಕ ಹಾಗೂ ಅಧ್ಯಯನ ಶೀಲರಿಗೆ ಅನುಕೂಲವಾಗುವಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ ಎಂದು ಅಶೋಕ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಕಸಾಪ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ್ ಪಾಟೀಲರು ಕೂಡಾ ಈ ಬಾರಿ ಸ್ಪರ್ಧೆಗೆ ಇಳಿದಿದ್ದಾರೆ. ಚಂಪಾ ಅವರ ಸ್ಪರ್ಧೆಗೆ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಅಶೋಕ್ ಕಣಕ್ಕಿಳಿದಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ.
Comments
English summary
Kannada Actor Ashok has entered Kannada Sahitya Parishat Election field. Ashok has released his manifestation recently will be contesting against Prof. Chandrashekar Patil and others for the post of President of KSP.
Story first published: Sunday, January 29, 2012, 11:46 [IST]