ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂಗಾರಪ್ಪ ಸಾಧನೆಗೆ ಕಾಂಗ್ರೆಸ್ ಶ್ರೀರಕ್ಷೆ: ಕುಮಾರ
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎಸ್ ಬಂಗಾರಪ್ಪ ಅವರ ತಿಂಗಳ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಗಾರಪ್ಪ ಅವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅನನ್ಯ.
ಆದರೆ ಎಸ್ ಬಂಗಾರಪ್ಪ ಕೆಲವು ಸಂದರ್ಭದಲ್ಲಿ ಕಾಂಗ್ರೆಸ್ ಬಿಟ್ಟು, ಪಕ್ಷದೊಳಗೆ ಗೊಂದಲ ನಿರ್ಮಾಣ ಮಾಡಿದ್ದು ದುರದೃಷ್ಟಕರ. ಹೀಗಿದ್ದೂ ಕೂಡಾ ಪಕ್ಷ ಬಂಗಾರಪ್ಪರನ್ನು ಎಂದೂ ಕೈಬಿಟ್ಟಿಲ್ಲ. ಅವರ ವರ್ಚಸ್ಸಿಗೆ ಧಕ್ಕೆ ತರುವ ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂದು ಹೇಳಿದರು.
ಈಗಲೂ ಅಷ್ಟೇ ಬಂಗಾರಪ್ಪನವರ ಬಂಗಾರಪ್ಪ ಅವರ ಚಿಂತನೆ ಹಾಗೂ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಅವರ ಜನಪರ ಕಾಳಜಿಯ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಾಗಿ ನಿಂತು ಎಲ್ಲವನ್ನೂ ಪೂರೈಸಿದೆ ಎಂದರು.
Comments
ಎಸ್ ಬಂಗಾರಪ್ಪ ಮಧು ಬಂಗಾರಪ್ಪ ಬೆಂಗಳೂರು ಕುಮಾರ ಬಂಗಾರಪ್ಪ ಸೊರಬ ವಿವಾದ ಸಾವು ದೇವರು ಶಂಭೋ ಶಂಕರ ಶಿವಮೊಗ್ಗ s bangarappa soraba madhu bangarappa death congress
English summary
Kumar Bangarappa who performing his father Bangarappa's last rites by staying parallel with his younger brother Madhu had criticised Former Karnataka CM Bangarappa's political achievements. Again he stressed that Bangarappa's achievements are nothing but Congress gifts,
Story first published: Thursday, January 26, 2012, 10:18 [IST]