ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂ ಹಣ್ಣು ಅಂಗಡಿಗಾಗಿ ರವಿ ಬೆಳಗೆರೆ ಸತ್ಯಾಗ್ರಹ

By Mahesh
|
Google Oneindia Kannada News

Ravi Belagare speaking to the media
ಬೆಂಗಳೂರು, ಜ.25: ಗಾಂಧಿ ಬಜಾರಿನ ಹೂ, ಹಣ್ಣು ತರಕಾರಿ ಅಂಗಡಿಗಳ ಧ್ವಂಸವನ್ನು ಖಂಡಿಸಿ ಪತ್ರಕರ್ತ ರವಿ ಬೆಳೆಗೆರೆ ಅವರು ಬುಧವಾರ (ಜ.25) ಸತ್ಯಾಗ್ರಹ ಆರಂಭಿಸಿದ್ದಾರೆ. ರವಿ ಬೆಳಗೆರೆ ಅವರ ಪುಸ್ತಕದಂಗಡಿ 'ಬೆಳೆಗೆರೆ ಬುಕ್ಸ್ ಅಂಡ್ ಕಾಫಿ' ಹೂ ಹಣ್ಣಿನ ಬೀದಿಯಲ್ಲಿ ಫೆ.5 ರ ಸಂಜೆ 4.30 ಗೆ ಆರಂಭವಾಗಲಿದೆ.

ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿ ಉಳಿಸಿಕೊಂಡಿರುವ ಗಾಂಧಿಬಜಾರು, ಬಸವನಗುಡಿ, ಮಲ್ಲೇಶ್ವರ, ಜಯನಗರ ಭಾಗಗಳಲ್ಲಿ ಈ ರೀತಿ ಅಮಾನುಷ ಕ್ರಮ ಜರುಗಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆಯಾಗಿದೆ.

ಬಿಬಿಎಂಪಿ ಆತುರ ಕ್ರಮ ಕೈಗೊಳ್ಳುವ ಮೊದಲು ಮಾನವೀಯತೆ ದೃಷ್ಟಿಯಿಂದ ಒಮ್ಮೆ ನೋಡಬಹುದಿತ್ತು. ಇಲ್ಲಿರುವ ನನ್ನ ಅಕ್ಕ ತಂಗಿಯರು ಅಣ್ಣ ತಮ್ಮಂದಿರ ನೋವಿಗೆ ನಾನು ಸ್ಪಂದಿಸಲೇ ಬೇಕಾಗಿದೆ ಅದಕ್ಕಾಗಿ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ರವಿ ಬೆಳೆಗೆರೆ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿದರು.

ಹಲವಾರು ವರ್ಷಗಳಿಂದ ವ್ಯಾಪಾರ ದೃಷ್ಟಿಯಿಂದ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ಗಾಂಧಿಬಜಾರನ್ನು ಅಪ್ಪಿಕೊಂಡಿರುವ ವ್ಯಾಪಾರಿಗಳ ಕೂಗಿಗೆ ಸ್ಪಂದಿಸದೆ ಬಿಬಿಎಂಪಿ ಅವರು ಅಂಗಡಿ ಮುಂಗಟ್ಟುಗಳನ್ನು ರಾತ್ರೋರಾತ್ರಿ ಧ್ವಂಸಗೊಳಿಸಿದ್ದರು.

English summary
Ravi Belagere starts dharna and protest against Gandhi bazaar Demolition drive. Fruit and Flower vendor and many citizens supported Journalist Ravi Belagere who is due to start is new venture a book stall in this famous vicinity of south Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X