ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್ ಕಲ್ಬುರ್ಗಿ ರಾಯಚೂರು ಕೊಪ್ಪಳ ಯಾದಗಿರಿ ಬಂದ್
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ, ಹೈದ್ರಾಬಾದ್ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ, ವಿವಿಧ ಜನಪರ, ಕನ್ನಡಪರ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಕರ ಪರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ.
ಬರುವ ಚಳಿಗಾಲದ ಬಜೆಟ್ ಅಧಿವೇಶನದಲ್ಲಿ 371ನೇ ಅನುಚ್ಛೇದದ ತಿದ್ದುಪಡಿಯಾಗಬೇಕು ಎಂದು ಹೈ.ಕ.ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಆಗ್ರಹಿಸಿದೆ. ಬೀದರ್, ಕಲ್ಬುರ್ಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲಾ ಮತ್ತು ತಾಲೂಕು ಕೇಂದ್ರ ಹಾಗೂ ನಗರ ಕೇಂದ್ರಗಳಲ್ಲಿ ಬಂದ್ ಆಚರಿಸಲಾಗುತ್ತಿದೆ.
ಬಂದ್ಗೆ ಸಹಕರಿಸುವಂತೆ ಹೈ.ಕ.ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮನವಿಮಾಡಿಕೊಂಡಿದ್ದಾರೆ. 371ನೇ ಕಲಂ ತಿದ್ದುಪಡಿಗೆ ನನ್ನ ಬೆಂಬಲ ಇದೆ ಎಂದು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಸೋಮವಾರ ಯಾದಗಿರಿ ನಗರದ ಪ್ರವಾಸಿ ಮಂದಿರದಲ್ಲಿ ಹೇಳಿದರು.
Comments
ಹೈದರಾಬಾದ್ ಕರ್ನಾಟಕ ಬಂದ್ ಸಂವಿಧಾನ ಜಿಲ್ಲಾಸುದ್ದಿ hyderabad karnataka bandh indian constitution district news
English summary
Hyderabad Karnataka bandh is observed on January 24 to pressurize the central govt to amend article 371 of Constitution of India for the development of the region, which has been neglected so far. Bandh is being observed in Bidar, Gulbarga, Raichur, Koppal, Yadgir districts.
Story first published: Tuesday, January 24, 2012, 10:56 [IST]