ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿಬಜಾರ್ ವಿದ್ಯಾರ್ಥಿ ಭವನ್ ದೋಸೆಗೆ ಏನಾಯ್ತು!?

By Srinath
|
Google Oneindia Kannada News

gandhi-bazaar-vidyarthi-bhavan-dosa-safe
ಬೆಂಗಳೂರು, ಜ.24: 'ಹೌದಾ! ಗಾಂಧಿಬಜಾರ್ ಮಾರುಕಟ್ಟೆಗಳನ್ನೆಲ್ಲ ನಗರಪಾಲಿಕೆಯವರು ನೆಲಸಮ ಮಾಡಿದ್ದಾರಂತೆ. Oh my God! ನಂಬಲಿಕ್ಕೇ ಆಗ್ತಿಲ್ಲ. ಹಾಗಾದರೆ ಅಲ್ಲಿದ್ದ ವಿದ್ಯಾರ್ಥಿ ಭವನ್, ರೋಟಿ ಘರ್ ಳಿಗೂ ಪೆಟ್ಟು ಬಿತ್ತಾ? ಅಲ್ಲಿ ಇನ್ಮುಂದೆ ಮಸಾಲೆ ದೋಸೆ ಸಿಗೋಲ್ವಾ?' ಎಂದು ವಿದೇಶಗಳಿಂದಲೂ ಜನ ದಟ್ಸ್ ಕನ್ನಡಕ್ಕೆ ಮೇಲ್ ಮಾಡಿ ಆತಂಕದಿಂದ ಕೇಳುತ್ತಿದ್ದಾರೆ.

hold on! ನಿಮ್ಮ ವಿದ್ಯಾರ್ಥಿ ಭವನ್ ಮಸಾಲೆ ದೋಸೆಗೆ, ರೋಟಿ ಘರ್ ನ ರುಚಿಕಟ್ಟಾದ ತಿಂಡಿತಿನಿಸಿಗೆ ಯಾವುದೇ ಧಕ್ಕೆ ಬಂದಿಲ್ಲ. ಖಂಡಿತಾ ಈ ಬಾರಿ ಬಸವನಗುಡಿಗೆ ಬಂದಾಗ ಒಮ್ಮೆ ಇಲ್ಲಿಗೆ ಭೇಟಿ ನೀಡಬಹುದು. ಇನ್ನಷ್ಟು ಪ್ರಶಾಂತವಾಗಿ ಕುಳಿತು ಮಸಾಲೆ ದೋಸೆ ಮುರಿಯಬಹುದು.

ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (Pics by Sadhu)

ಸದ್ಯಕ್ಕೆ ಇಲ್ಲಿನ ಹೋಟೆಲುಗಳ ಮುಂದೆಲ್ಲ ಯಾವುದೋ ಪುರಾತನ ನಗರದ ಪಳೆಯುಳಿಕೆಗಳಂತೆ ಹಣ್ಣೂ, ಹೂ, ತರಕಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆಯಾದರೂ ಮುಂದಿನ ದಿನಗಳಲ್ಲಿ ಸ್ವಚ್ಛತೆ ಇಲ್ಲಿ ಮೈಗೂಡಲಿದೆ ಎಂದು ಬಸನವಗುಡಿ ಜನ ಚುಮುಚುಮು ಚಳಿಯಲ್ಲಿ ಕಾಫಿ ಹೀರುತ್ತಾ ದೂರದ ಜನಕ್ಕೆ ಭರವಸೆಯ ಸಂದೇಶ ನೀಡಿದ್ದಾರೆ.

English summary
BBMP has demolished all the flower markets, fruit stalls and vegetable stalls in Gandhi Bazaar, Bangalore on Jan 23 midnight. The area people are happy as the Gandhi Bazaar flower markets razed to round. But worried about the safety of Gandhi Bazaar vidyarthi bhavan dosa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X