ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ ಗೆಲುವು ತಾತ್ಕಾಲಿಕ, ಅಸ್ಥಿರತೆ ಮುಂದುವರಿಕೆ

By Mahesh
|
Google Oneindia Kannada News

Kodimutt Seer Prediction
ಹಾಸನ, ಜ.23: "ನೀಚನಿಗೆ ದೊರೆತನ, ಹೇಡಿಗೆ ಹಿರಿತನ, ಅವಿವೇಕಿಗೆ ಮಠಾಧಿಪತಿ ಸ್ಥಾನ ಸಿಕ್ಕರೆ ನಾಡು ಹೇಗಿರುತ್ತೋ ನಮ್ಮ ನಾಡು ಕೂಡಾ ಹಾಗೆ ಇದೆ". ಹಲವು ಬಾರಿ ಬಿಜೆಪಿ ಸರ್ಕಾರ ಗಡಾಂತರದಿಂದ ಪಾರಾಗಿದೆ. ಆದರೆ, ರಾಜಕೀಯ ಅಸ್ಥಿರತೆ 2020ರವರೆಗೂ ಮುಂದುವರೆಯಲಿದೆ ಎಂದು ಅರಸೀಕೆರೆಯ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಸೋಮವಾರಪೇಟೆಯಲ್ಲಿ ಕೊಡವ ಸಮಾಜ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾವೇಶದಲ್ಲಿ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಜನಪ್ರತಿನಿಧಿಗಳು ದೇಶದ ಹಿತಕ್ಕೆ ಏನನ್ನೂ ಮಾಡುತ್ತಿಲ್ಲ. ಸ್ವಹಿತಕ್ಕೆ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ರಾಜಕಾರಣಿಗಳ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದರು.

ರಾಜ್ಯದಲ್ಲಿ ಅಕಾಲಿಕವಾಗಿ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟವಾಗಿ ಸ್ವಾಮೀಜಿಗಳು ಉತ್ತರಿಸದೆ, ಚುನಾವಣೆ ನಡೆದರೂ ನಡೆಯಬಹುದು ಎಂದರು.

ಯಡಿಯೂರಪ್ಪ ಅವರ ಜನಪ್ರಿಯತೆ,ಗೆಲುವು ತಾತ್ಕಾಲಿಕವಾದದ್ದು, ಬಿಜೆಪಿ ಸ್ಥಿರ ಸರ್ಕಾರ ನಡೆಸುವ ಕನಸು ನನಸಾಗಲು ಕಾಲ ಪಕ್ವವಾಗಿಲ್ಲ ಎಂದರು. ವಿಪಕ್ಷಗಳಿಗೂ ಗ್ರಹಗತಿ ಸರಿ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರಾಜಕೀಯ ಅಸ್ಥಿರತೆ ಮುಂದುವರೆಯುತ್ತದೆ ಎಂದು ಸ್ವಾಮೀಜಿಗಳು ಹೇಳಿದರು.

English summary
According to the Kodi Mutt seer's latest prediction Yeddyurappa is acting like a single community leader. Karnataka BJP crisis continues and no leader will get simple huge majority and political uncertainty will continue till 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X