ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.4ಕ್ಕೆ ಚಿದಂಬರಂಗೆ ಏನು ಕಾದಿದೆಯೋ?

By Srinath
|
Google Oneindia Kannada News

2g-scam-swamy-chidambaram-court-order-feb4
ನವದೆಹಲಿ, ಜ.23: 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ವಿರುದ್ಧ ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಜನತಾ ಪಾರ್ಟಿಯ ಸುಬ್ರಹ್ಮಣ್ಯನ್‌ ಸ್ವಾಮಿ ಸಾಕ್ಷ್ಯಗಳನ್ನು ಒದಗಿಸಿ, ವಾದ ಮಂಡನೆ ಮುಗಿಸಿದ್ದಾರೆ. 'ಈ ಬಗ್ಗೆ ಫೆ. 4ರಂದು ತೀರ್ಪು ಘೋಷಿಸಲಾಗುವುದು' ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಒ ಪಿ ಸೈನಿ ಹೇಳಿದ್ದಾರೆ.

ಆದ್ದರಿಂದ ಚಿದಂಬರಂ ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಜನತಾ ಪಾರ್ಟಿಯ ಸುಬ್ರಹ್ಮಣ್ಯನ್‌ ಸ್ವಾಮಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ದಿಲ್ಲಿ ಕೋರ್ಟ್‌ ತನ್ನ ತೀರ್ಪನ್ನು ಫೆ. 4ಕ್ಕೆ ಕಾದಿರಿಸಿದೆ.

ವಾದ ಮಂಡನೆ ವೇಳೆ ಕೋರ್ಟಿಗೆ ಸಾಕ್ಷ್ಯಗಳನ್ನು ಒದಗಿಸಿದ ಸ್ವಾಮಿ 'ಈ ಸಾಕ್ಷ್ಯಗಳು ಹೇಳುವಂತೆ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಚಿದಂಬರಂ ಅವರದ್ದೂ ಇದೆ ಎಂದರು. ರಾಜಾ ಮತ್ತು ಚಿದಂಬರಂ ಇಬ್ಬರೂ ಅಪರಾಧದಲ್ಲಿ ಪಾಲುದಾರರು.

ಚಿದಂಬರಂ ಈ ಹಗರಣದಲ್ಲಿ ಸಂಚು ರೂಪಿಸಿ ಶಾಮೀಲಾಗಿರುವುದು ಸ್ಪಷ್ಟ' ಎಂದು ಅವರು ಆರೋಪಿಸಿದರು. ಸ್ವಾನ್‌ ಟೆಲಿಕಾಂನ ಮತ್ತು ಯುನಿಟೆಕ್‌ ವಯರ್ ಲೆಸ್‌ ಕಂಪನಿಯ ಷೇರುಗಳನ್ನು ಎಟಿಸಲಾಟ್‌ ಮತ್ತು ಟೆಲಿನಾರ್ ಕಂಪನಿಗಳಿಗೆ ಮಾರುವಂತೆ ಮಾಡುವ ತಂತ್ರದಲ್ಲೂ ಚಿದಂಬರಂ ಕೈವಾಡವಿದೆ ಎಂದೂ ಸ್ವಾಮಿ ಆರೋಪಿಸಿದ್ದಾರೆ

English summary
A special Central Bureau of Investigation (CBI) court has reserved its order on a plea by Janata Party president Subramanian Swamy to haul Home Minister P. Chidambaram to court in the 2G spectrum case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X