ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಫೆ.4ಕ್ಕೆ ಚಿದಂಬರಂಗೆ ಏನು ಕಾದಿದೆಯೋ?
ಆದ್ದರಿಂದ ಚಿದಂಬರಂ ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಜನತಾ ಪಾರ್ಟಿಯ ಸುಬ್ರಹ್ಮಣ್ಯನ್ ಸ್ವಾಮಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ದಿಲ್ಲಿ ಕೋರ್ಟ್ ತನ್ನ ತೀರ್ಪನ್ನು ಫೆ. 4ಕ್ಕೆ ಕಾದಿರಿಸಿದೆ.
ವಾದ ಮಂಡನೆ ವೇಳೆ ಕೋರ್ಟಿಗೆ ಸಾಕ್ಷ್ಯಗಳನ್ನು ಒದಗಿಸಿದ ಸ್ವಾಮಿ 'ಈ ಸಾಕ್ಷ್ಯಗಳು ಹೇಳುವಂತೆ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಚಿದಂಬರಂ ಅವರದ್ದೂ ಇದೆ ಎಂದರು. ರಾಜಾ ಮತ್ತು ಚಿದಂಬರಂ ಇಬ್ಬರೂ ಅಪರಾಧದಲ್ಲಿ ಪಾಲುದಾರರು.
ಚಿದಂಬರಂ ಈ ಹಗರಣದಲ್ಲಿ ಸಂಚು ರೂಪಿಸಿ ಶಾಮೀಲಾಗಿರುವುದು ಸ್ಪಷ್ಟ' ಎಂದು ಅವರು ಆರೋಪಿಸಿದರು. ಸ್ವಾನ್ ಟೆಲಿಕಾಂನ ಮತ್ತು ಯುನಿಟೆಕ್ ವಯರ್ ಲೆಸ್ ಕಂಪನಿಯ ಷೇರುಗಳನ್ನು ಎಟಿಸಲಾಟ್ ಮತ್ತು ಟೆಲಿನಾರ್ ಕಂಪನಿಗಳಿಗೆ ಮಾರುವಂತೆ ಮಾಡುವ ತಂತ್ರದಲ್ಲೂ ಚಿದಂಬರಂ ಕೈವಾಡವಿದೆ ಎಂದೂ ಸ್ವಾಮಿ ಆರೋಪಿಸಿದ್ದಾರೆ
Comments
ಪಿ ಚಿದಂಬರಂ ಸುಬ್ರಮಣ್ಯ ಸ್ವಾಮಿ ಎ ರಾಜಾ ಕನಿಮೊಳಿ ಜಾಮೀನು ಬಂಧನ ಡಿಎಂಕೆ ತಿಹಾರ್ ಜೈಲು ಸಿಬಿಐ 2g scam cbi kanimozhi tihar jail a raja dmk subramaniam swami p chidambaram
English summary
A special Central Bureau of Investigation (CBI) court has reserved its order on a plea by Janata Party president Subramanian Swamy to haul Home Minister P. Chidambaram to court in the 2G spectrum case.
Story first published: Monday, January 23, 2012, 13:39 [IST]