ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ರಾಜೇಶ್ ಗುಂಡೂರಾವ್

By Srinath
|
Google Oneindia Kannada News

madhu-jds-youth-chief-rajesh-gundu-rao-to-quit
ಬೆಂಗಳೂರು, ಜ.22: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮಾತು ತಪ್ಪಿ ಜೆಡಿಎಸ್‌ ಯುವ ಘಟಕಕ್ಕೆ ದಿಢೀರನೆ ಮಧು (ಬಂಗಾರಪ್ಪ) ಸಿಂಚನ ಮಾಡಿದ್ದನ್ನು ವಿರೋಧಿಸಿ ಜೆಡಿಎಸ್ ನಗರ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೇಶ್ ಗುಂಡೂರಾವ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಇದರೊಂದಿಗೆ ಯುವ ಜೆಡಿಎಸ್‌ನಲ್ಲಿ ಭಿನ್ನಮತ ಉಲ್ಬಣಗೊಂಡಂತಾಗಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಧು ಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಕಳೆದ ವಾರ ದಿಢೀರನೆ ಆಯ್ಕೆ ಮಾಡುತ್ತಿದ್ದಂತೆ ರಾಜೇಶ್ ಗುಂಡೂರಾವ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೇ ವೇಳೆ, ತಮ್ಮ ಅಸಮಾಧಾನ ಮಧು ಬಂಗಾರಪ್ಪ ಅವರ ವಿರುದ್ಧ ಅಲ್ಲ; ಆದರೆ ಮಾತುತಪ್ಪಿದ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೇಶ್ ಗುಂಡೂರಾವ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ನೇಮಕ ಮಾಡುವುದಾಗಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಅವರೀಗ ಮಾತು ತಪ್ಪಿದ್ದು, ಆ ಸ್ಥಾನಕ್ಕೆ ಮಧು ಬಂಗಾರಪ್ಪರನ್ನು ನೇಮಕಗೊಳಿಸಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ತಾನು ನಾಳೆ ಅಥವಾ ನಾಡಿದ್ದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ನಿಂದ ಹೊರನಡೆಯುವುದಾಗಿ ತಿಳಿಸಿದರು.

English summary
Rajesh Gundu Rao younger son of former Congress chief minister R Gundu Rao (in 1989) is all set to quit JDS in protest against not appointing him as JDS youth wing Chief. Incidentally Madhu Bangarappa has been named as Chief of JDS youth wing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X