ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ರಾಜೇಶ್ ಗುಂಡೂರಾವ್
ಇದರೊಂದಿಗೆ ಯುವ ಜೆಡಿಎಸ್ನಲ್ಲಿ ಭಿನ್ನಮತ ಉಲ್ಬಣಗೊಂಡಂತಾಗಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಧು ಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಕಳೆದ ವಾರ ದಿಢೀರನೆ ಆಯ್ಕೆ ಮಾಡುತ್ತಿದ್ದಂತೆ ರಾಜೇಶ್ ಗುಂಡೂರಾವ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೇ ವೇಳೆ, ತಮ್ಮ ಅಸಮಾಧಾನ ಮಧು ಬಂಗಾರಪ್ಪ ಅವರ ವಿರುದ್ಧ ಅಲ್ಲ; ಆದರೆ ಮಾತುತಪ್ಪಿದ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೇಶ್ ಗುಂಡೂರಾವ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ನೇಮಕ ಮಾಡುವುದಾಗಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಅವರೀಗ ಮಾತು ತಪ್ಪಿದ್ದು, ಆ ಸ್ಥಾನಕ್ಕೆ ಮಧು ಬಂಗಾರಪ್ಪರನ್ನು ನೇಮಕಗೊಳಿಸಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ತಾನು ನಾಳೆ ಅಥವಾ ನಾಡಿದ್ದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ನಿಂದ ಹೊರನಡೆಯುವುದಾಗಿ ತಿಳಿಸಿದರು.
Comments
ಮಧು ಬಂಗಾರಪ್ಪ ಎಸ್ ಬಂಗಾರಪ್ಪ ಜೆಡಿಎಸ್ ನೇಮಕಾತಿ ಬೆಂಗಳೂರು ಕುಮಾರ ಬಂಗಾರಪ್ಪ ಸೊರಬ ವಿವಾದ ಸಾವು ಶಿವಮೊಗ್ಗ s bangarappa soraba madhu bangarappa death bjp congress
English summary
Rajesh Gundu Rao younger son of former Congress chief minister R Gundu Rao (in 1989) is all set to quit JDS in protest against not appointing him as JDS youth wing Chief. Incidentally Madhu Bangarappa has been named as Chief of JDS youth wing.
Story first published: Monday, January 23, 2012, 11:05 [IST]