ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ ಮೇಡಂಗೂ ಗೂಸಾ ಕೊಟ್ಟ ಸದಾನಂದ ಗೌಡ

By Srinath
|
Google Oneindia Kannada News

karnataka-cm-sadananda-gowda-takes-shobha-to-task
ಬೆಂಗಳೂರು, ಜ.20: ಕುತೂಹಲಕಾರಿ ಸಂಗತಿಯೆಂದರೆ ಸದಾನಂದರು ಗುರುವಾರದ ಸಂಪುಟ ಸಭೆಯಲ್ಲಿ ಯಡ್ಡಿ ಟಾಲಂ ಅವರನ್ನು ಅಕ್ಷರಶ: ತರಾಟೆಗೆ ತೆಗೆದುಕೊಂಡಿದ್ದರು. ಇದನ್ನು ನೋಡಿ ಬೆಚ್ಚಿಬಿದ್ದ ಶೋಭಾ ಮೇಡಂ ಒಂದು ಹಂತದಲ್ಲಿ 'ಈ ವಿಷಯಗಳನ್ನೆಲ್ಲ ಇಲ್ಲಿ ಚರ್ಚಿಸುವುದು ಸೂಕ್ತವಲ್ಲ ಅನಿಸುತ್ತೆ. ಪತ್ರಿಕೆಗಳಲ್ಲಿ ನಾಳೆ ದೊಡ್ಡದಾಗಿ ಅದೇ ಸುದ್ದಿಯಾಗಿ ಬರುತ್ತದೆ' ಎಂದು ಎಚ್ಚರಿಸಿದರು ಎನ್ನಲಾಗಿದೆ.

ಶೋಭಾ ಮಾತಿಗೆ ಕೆರಳಿದರೂ ಎಂದಿನಂತೆ ತಮ್ಮ ಶಾಂತ ಸ್ವಭಾವದಲ್ಲೇ ಪ್ರತಿಕ್ರಿಯಿಸಿದ ಸದಾನಂದಗೌಡರು, 'ಬರೆದರೆ ಬರೆಯಲಿ ಬಿಡಿ. ನಾನೇನೂ ತಪ್ಪು ಮಾತನಾಡುತ್ತಿಲ್ಲ' ಎದು ಖಡಕ್ಕಾಗಿ ಹೇಳಿದ್ದಾರೆ. ಇದರಿಂದ ಶೋಭಾ ಮೇಡಂ ಸೇರಿದಂತೆ ಇಡೀ ಯಡ್ಡಿ ಪಟಾಲಂ ಕೈಕಟ್ ಬಾಯ್ಮುಚ್ ಆಗಿದೆ.

ಅಶೋಕ ಮಹಾರಾಜರಿಗೂ ಮಂಗಳಾರತಿ: ಇದಕ್ಕೂ ಮೊದಲು 'ಸಾರ್ ಆಗಿದ್ದಾಯ್ತು. ಎಲ್ಲವನ್ನು ಮರೆತುಬಿಡಿ. ನಿಮಗೆ ನೋವಾಗಿದ್ದರೆ ಸಾರಿ ಕೇಳುತ್ತೇವೆ' ಎಂದು ತುಂಬಿದ ಸಭೆಯಲ್ಲಿ ಅಶೋಕ ಮಹಾರಾಜರು ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದ್ದನ್ನು ಕೇಳಿಸಿಕೊಂಡ ಉನ್ನತ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 'ಮುಂದೆಯೂ ಹೀಗೇ ಆದರೆ ಹೇಗೆ?' ಎಂಬ ಪ್ರಶ್ನೆಯನ್ನು ಮುಂದಿಟ್ಟು ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಸಂಗವೂ ನಡೆಯಿತು.

English summary
Karnataka CM Sadananda Gowda BSY followers who are talking against the CM and inturn the BJP Govt in the State. During the cabinet meeting on Jan 19 Minister Shobha Karndlaje was also taken to task by CM Sadananda Gowda,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X