ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್: ಮಧು ಬಂಗಾರಪ್ಪ ನೇಮಕಕ್ಕೆ ವಿರೋಧ

By Srinath
|
Google Oneindia Kannada News

why-madhu-bangarappa-appointed-jds-youth-chief
ಬೆಂಗಳೂರು, ಜ. 19: ಜೆಡಿಎಸ್‌ ಯುವ ಘಟಕಕ್ಕೆ ದಿಢೀರ್ ಮಧು (ಬಂಗಾರಪ್ಪ) ಸಿಂಚನವಾಗಿದೆ. ಹಳಿಯಾಳದಲ್ಲಿ ಜನವರಿ 28 ರಂದು ನಡೆಯಲಿರುವ ಸಮಾವೇಶದಲ್ಲಿ ಮಧು ಬಂಗಾರಪ್ಪ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಆದರೆ ಇದಕ್ಕೆ ಕಾರಣವಾದರೂ ಏನೆಂದು ಕೆದಕಿದಾಗ ...

ಮಧು ಬಂಗಾರಪ್ಪ ಅವರತ್ತ ಕಾಂಗ್ರೆಸ್‌ ಬಲೆ ಬೀಸಿತ್ತು ಎಂಬ ಮಾತಿತ್ತು. ಹಾಗಾಗಿ ಮಧು ಕಾಂಗ್ರೆಸ್‌ನತ್ತ ಹಾರುವುದನ್ನು ತಡೆಯಲು ದಿಢೀರಾಗಿ ಅವರನ್ನು ಜೆಡಿ ಎಸ್ ಯುವಘಟಕದ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ರಾಜೇಶ್ ಗುಂಡೂರಾವ್ ಈ ನೇಮಕದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುತೂಹಲದ ಸಂಗತಿಯೆಂದರೆ, ಹಳಿಯಾಳ ಶಾಸಕ ಸುನಿಲ್‌ ಹೆಗಡೆ ಅವರನ್ನು ಇತ್ತೀಚೆಗಷ್ಟೇ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ಇನ್ನೂ ಅಧಿಕಾರವನ್ನೇ ಸ್ವೀಕರಿಸಿಲ್ಲ. ಅಷ್ಟರೊಳಗೆ ಮಧು ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿಸಲಾಗಿದೆ. ಬಹುಶಃ ಕಾಂಗ್ರೆಸ್ ಭೀತಿ ಇದಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಪ್ರಸ್ತುತ ಯುವ ಘಟಕದ ಅಧ್ಯಕ್ಷರಾಗಿದ್ದ ಹಳಿಯಾಳ ಶಾಸಕ ಸುನಿಲ್‌ ಹೆಗಡೆ ಉತ್ತರ ಕನ್ನಡ ಭಾಗದ ಸಂಘಟನೆ ಮತ್ತು ಕ್ಷೇತ್ರದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ. ಹೀಗಾಗಿ, ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ.

English summary
Madhu Bangarappa who recently has said that JDS is like home to him has been accorded with Presidentship of JDS Youth wing. But why this sudden take-over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X