ಜೆಡಿಎಸ್: ಮಧು ಬಂಗಾರಪ್ಪ ನೇಮಕಕ್ಕೆ ವಿರೋಧ
ಮಧು ಬಂಗಾರಪ್ಪ ಅವರತ್ತ ಕಾಂಗ್ರೆಸ್ ಬಲೆ ಬೀಸಿತ್ತು ಎಂಬ ಮಾತಿತ್ತು. ಹಾಗಾಗಿ ಮಧು ಕಾಂಗ್ರೆಸ್ನತ್ತ ಹಾರುವುದನ್ನು ತಡೆಯಲು ದಿಢೀರಾಗಿ ಅವರನ್ನು ಜೆಡಿ ಎಸ್ ಯುವಘಟಕದ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ರಾಜೇಶ್ ಗುಂಡೂರಾವ್ ಈ ನೇಮಕದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಹಳಿಯಾಳ ಶಾಸಕ ಸುನಿಲ್ ಹೆಗಡೆ ಅವರನ್ನು ಇತ್ತೀಚೆಗಷ್ಟೇ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ಇನ್ನೂ ಅಧಿಕಾರವನ್ನೇ ಸ್ವೀಕರಿಸಿಲ್ಲ. ಅಷ್ಟರೊಳಗೆ ಮಧು ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿಸಲಾಗಿದೆ. ಬಹುಶಃ ಕಾಂಗ್ರೆಸ್ ಭೀತಿ ಇದಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಪ್ರಸ್ತುತ ಯುವ ಘಟಕದ ಅಧ್ಯಕ್ಷರಾಗಿದ್ದ ಹಳಿಯಾಳ ಶಾಸಕ ಸುನಿಲ್ ಹೆಗಡೆ ಉತ್ತರ ಕನ್ನಡ ಭಾಗದ ಸಂಘಟನೆ ಮತ್ತು ಕ್ಷೇತ್ರದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ. ಹೀಗಾಗಿ, ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ.