ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಬಿಜೆಪಿ ಕೈ ತಪ್ಪಲಿದೆ?
ಆದರೆ, ಯಡಿಯೂರಪ್ಪ ಅವರಂತೆ ರಾಜ್ಯ ಪ್ರವಾಸಕ್ಕೆ ಮುಂದಾಗಿರುವ ಜೆಡಿಎಸ್ ಕೂಡಾ ಅಚ್ಚರಿ ಫಲಿತಾಂಶ ನೀಡುವ ನಿರೀಕ್ಷೆ ಹೊಂದಿದೆ. ಆದರೆ, ಸಾರ್ವಜನಿಕರ ಪ್ರಕಾರ ಈ ಬಾರಿ ಸ್ವಲ್ಪ ಯಾಮಾರಿದರೂ ಸೋಲು ಖಚಿತ ಎನ್ನಲಾಗುತ್ತಿದೆ.
2009ರ ಲೋಕಸಭೆ ಚುನಾವಣೆಯಲ್ಲಿ ಡೀವಿ ಎದುರು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ 27,018 ಮತಗಳ ಅಂತರದಿಂದ ಸೋತಿದ್ದರು. ಆಗ ಬಿಜೆಪಿಯ ಡೀವಿಗೆ 4,01,441 ಮತ ಮತ್ತು ಹೆಗ್ಡೆಗೆ 3,74,423 ಮತಗಳು ಬಿದ್ದಿತ್ತು. ಆದ್ದರಿಂದ ಈಗಲೂ ಕ್ಷೇತ್ರದಲ್ಲಿ ಬಿಜೆಪಿಗೆ ಹೆಗ್ಡೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಕಾಂಗ್ರೆಸ್ ಕೂಡಾ ಹೆಗ್ಡೆಗೆ ಮತ್ತೆ ಅವಕಾಶ ನೀಡುವ ಸಾಧ್ಯತೆಯಿದೆ.
ಕೆಪಿಸಿಸಿ ಮೂಲಗಳ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಂಸದ ವಿನಯಕುಮಾರ ಸೊರಕೆ, ಕೇಂದ್ರ ಮಾಜಿ ಸಚಿವೆ ಡಿಕೆ ತಾರಾದೇವಿ ಸಿದ್ಧಾರ್ಥ ಮತ್ತು ಇನ್ನೊಬ್ಬ ಸಚಿವ ಬಿಎಲ್ ಶಂಕರ್ ಅವರ ಹೆಸರೂ ರೇಸಿನಲ್ಲಿದೆ.
ಸಿಟಿ ರವಿಗೆ ಬಹುತೇಕ ಟಿಕೆಟ್ ಸಿಗುವುದು ಕಷ್ಟವಾದ್ದರಿಂದ ಕಾರ್ಕಳದ ಸುನೀಲ್ ಕುಮಾರ್ ಗೆ ಅವಕಾಶ ಹೆಚ್ಚಿದೆ. ಎರಡೂ ಜಿಲ್ಲೆಗಳಿಗೆ ಬೇಕಾಗಿರುವ ಸುನೀಲ್ ಸಹಜವಾಗಿ ಜನಮನ್ನಣೆ ಗಳಿಸುವ ಸಾಧ್ಯತೆಯಿದೆ. ಅದು ಹೇಗೆ ಎಂದು ಮುಂದೆ ನೋಡುವ....
ಉಡುಪಿ ಚಿಕ್ಕಮಗಳೂರು ಕ್ಷೇತ್ರ ಕೂಡಾ ಸಮಸ್ಯೆಗಳ ಆಗರ....?