ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲರಿಗೆ ಪುಂಡ ಶಾಸಕ ಜಮೀರ್ ಪ್ರೇರಣೆಯಾದರೇ?

By Srinath
|
Google Oneindia Kannada News

does-zameer-ahmed-haj-ghar-inspire-bng-lawyers
ಬೆಂಗಳೂರು, ಜ.19: ಖುದ್ದು ಶಾಸಕನೇ ರೋಡ್ ರೌಡಿಯಾಗಿ ನಡೆದುಕೊಂಡರೆ ಜನಸಾಮಾನ್ಯರ ಗತಿಯೇನು? ಶಾಸಕ ಮಹಾಶಯ ವಿನಾಕಾರಣ, ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಭರದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಪುಂಡಾಟಿಕೆ ಮೆರೆದರೆ ಯಾರೇನು ಮಾಡಲು ಸಾಧ್ಯ? ತಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ ಎಂಬುದರ ಪರಿಜ್ಞಾನವೂ ಇಲ್ಲದೆ ನಡೆದುಕೊಂಡರೆ ಮಾಡುವುದೇನು?

ಬುಹುಶಃ, ಸದರಿ ಶಾಸಕ ಮಹಾಶಯನ ಪುಂಡಾಟಿಕೆಯೇ ಬೆಂಗಳೂರು ವಕೀಲರಿಗೂ ಪ್ರೇರಕವಾಗಿರಬಹುದು. ಸಾಕ್ಷಾತ್ ಗೃಹ ಸಚಿವರು, ಅದಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿಯೇ ಭಾಗವಹಿಸಿದ್ದ ಸಮಾರಂಭದಲ್ಲಿ ಶಾಸಕನೊಬ್ಬ ಅಪ್ಪಟ ರೋಡ್ ರೌಡಿಯಾಗಿ ನಡೆದುಕೊಂಡಿದ್ದನ್ನು ಕಂಡು-ಕೇಳಿದ್ದ ವಕೀಲರೂ ಆತನಿಂದ ಪ್ರೇರಣೆಗೊಂಡು, ಯಾರು ಏನ್ ಮಾಡ್ಕೊಳ್ತಾರೋ ನೋಡೇ ಬಿಡೋಣ ಎಂದು ಹಠಕ್ಕೆ ಬಿದ್ದರೇ ?

ಶಾಸಕ ಮಹಾಶಯ ತನ್ನ ಅಸ್ತಿತ್ವವನ್ನು ರುಜುವಾತುಪಡಿಸಿಕೊಳ್ಳಲು ವೀರಾವೇಶದಿಂದ ಕೂಗಾಡಿದಂತೆ ತಾವೂ ಕೂಗಾಡಬೇಕು ಎನಿಸಿತೇ ಈ ಕಾನೂನು ಪುತ್ರರಿಗೆ? ಸದ್ಯ ಆ ಅವಿವೇಕಿ ಶಾಸಕ ಮಹಾಶಯ ಟೀ ಪಾಯ್ ಎತ್ತಿ ಬಿಸಾಡಿದಂತೆ ಈ ಕಾನೂನು ದೇವತೆಯ ಕಂದಮ್ಮಗಳು ಪುಂಡಾಟಿಕೆ ಮೆರೆಯಲಿಲ್ಲ ಎಂಬುದೇ ಸಮಾಧಾನಕರ.

ಇಲ್ಲಾಂದ್ರೆ ಅಲ್ಲೇ ನಿಂತಿದ್ದ ವಾಹನಗಳು ಅಥವಾ ಕಟ್ಟಡಗಳ ಮೇಲೆ ನಾಲ್ಕಾರು ಕಲ್ಲುಗಳನ್ನು ಬೀಸಿದ್ದರೆ ಧನುರ್ಮಾಸದಲ್ಲೂ ಬೆಂಗಳೂರು ತಣ್ಣಗಾಗಲು ಮತ್ತದೇ ಪೊಲೀಸರು ಸಾಕಷ್ಟು ಕಸರತ್ತು ಮಾಡಬೇಕಿತ್ತು. ಏನೂ ಬೇಡ... ಜನಸಾಮಾನ್ಯನೊಬ್ಬ ಪ್ರತಿಭಟನೆಯ ಹೆಸರಿನಲ್ಲಿ ಜಮೀರ್ ಅಹಮದರ ನ್ಯಾಷನಲ್ ಟ್ರಾವೆಲ್ಸ್ ಬಸ್ಸಿಗೆ ಒಂದೇ ಒಂದು ಕಲ್ಲೆಸೆದಿದ್ದರೆ ಪರಿಸ್ಥಿತಿ ಏನಾಗುತ್ತಿತು? ಹಜ್ ಘರ್ ವೈಶಿಷ್ಯ್ಟಗಳೇನು?: ಕ್ಲಿಕ್ ಮಾಡಿ

English summary
It seems Karnataka JDS MLA Zameer Ahmed's recent bash at Haj Ghar inspired Lawless Bangalore lawyers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X