ಹೆಸರಿಗೆ ತಕ್ಕಂತೆ ನಡೆದುಕೊಂಡ 'ಟಪಾಲ್' ಗಣೇಶ್
ರೆಡ್ಡಿ ಬೆಂಬಲಿಗ ಶಾಸಕರನ್ನು ಪಕ್ಷದಲ್ಲೇ ಮುಂದುವರಿಸುವ ಕುರಿತು ಬಿಜೆಪಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತೀವ್ರ ಸಿಡಿಮಿಡಿ ವ್ಯಕ್ತಪಡಿಸಿರುವ ಟಪಾಲ್, ರೆಡ್ಡಿ ಶಾಸಕರನ್ನು ಪಕ್ಷದಲ್ಲೇ ಮುಂದುವರಿಸುವ ಪಕ್ಷದ ತೀರ್ಮಾನದಿಂದ ನನ್ನ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
'ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ರೆಡ್ಡಿ ಸೋದರರಿಂದ ಬಳ್ಳಾರಿಯಲ್ಲಿ ಹಲವಾರು ಲೋಪದೋಷಗಳು ನಡೆದಿವೆ. ಅವುಗಳನ್ನು ಸರಿಪಡಿಸಲು ನಿಮ್ಮಥವರ ಬೆಂಬಲ ಅವಶ್ಯಕವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದರು. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರು ಉಲ್ಟಾ ಹೊಡೆದಿದ್ದಾರೆ' ಎಂದು ಗಣೇಶ್ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಮಧ್ಯೆ, ಟಪಾಲ್ ಗಣೇಶ್ ರಾಜೀನಾಮೆ ಪತ್ರ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಕೈಗೆ ತಲುಪಿಲ್ಲ. ಗಣೇಶ್ ರಾಜೀನಾಮೆ ಬಗ್ಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದೂ ಸ್ಪಷ್ಟವಾಗಿಲ್ಲ.