ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜು ಅನಂತಸ್ವಾಮಿ ನೆನಪಲ್ಲಿ ಸಂಗೀತ ಸಂಜೆ

By Mahesh
|
Google Oneindia Kannada News

Raju Ananthaswamy
ಬೆಂಗಳೂರು, ಜ.14: ಕರ್ನಾಟಕ ಕಂಡ ಪ್ರತಿಭಾವಂತ ಗಾಯಕ, ಸಂಗೀತ ಸಂಯೋಜಕ, ನಟ, ಬಹುಮುಖ ಪ್ರತಿಭೆಯಾಗಿದ್ದ 'ರಾಜು ಅನಂತಸ್ವಾಮಿ' ಕೇವಲ ಹೆಸರಲ್ಲ, ಒಂದು ಅನುಭವ; ನೆನಪಿಗೆ ಮೀರಿದ ಅನುಭವ.

ರಾಜು ಅನಂತಸ್ವಾಮಿ ನಮಗಾಗಿ ಹಾಡಿದ ಹಾಗೂ ಅವರು ಇಷ್ಟಪಟ್ಟು ಹಾಡುತ್ತಿದ್ದ ಹಾಡುಗಳ ಮೂಲಕ ಅವರನ್ನು ನೆನೆಯುವ ಸಲುವಾಗಿ ಕಲೆ ತಂಡ ಹಲವು ಗೆಳೆಯರೊಂದಿಗೆ ಸೇರಿ 'ನೆನಪಿಗೆ ಮೀರಿದ್ದು" ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ರಾಜು ಅನಂತಸ್ವಾಮಿಯವರ ಕೆಲವು ಶಿಷ್ಯರು, ಆಪ್ತ ಕಲಾವಿದರು ಹಾಡಲಿದ್ದು, ಇದಕ್ಕೆ ಜೊತೆಯಾಗಿ ಅವರ ಜೊತೆಗೆ ವಾದ್ಯಗಳನ್ನು ನುಡಿಸುತ್ತಿದ್ದ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.

ದಿನಾಂಕ: 17 ಜನವರಿ 2012
ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
ಸಂಜೆ:7.30 ರಿಂದ
ಪ್ರಸ್ತುತಿ: ಕಲೆ ತಂಡ ಹಾಗು ಗೆಳೆಯರು

ಹಾಡಿನಲ್ಲಿ: ಸುಜಯ್ ಶಾಸ್ತ್ರಿ, ಪ್ರದೀಪ್ ಬಿ ವಿ, ಸ್ಮಿತಾ ವಸಂತ್, ಮಧುಮಾಲ, ಪ್ರವೀಣ್ ಬಿ ವಿ ಹಾಗೂ ರಾಜು ಅನಂತಸ್ವಾಮಿಯವರೊಂದಿಗೆ ಹಾಡಿರುವ, ಅವರ ಬಳಿ ಕಲಿತಿರುವ ಅತಿಥಿ ಗಾಯಕರು.

ಗಿಟಾರ್: ಸುದರ್ಶನ್
ರಿದಂ ಪ್ಯಾಡ್ : ಜೆರಾಲ್ಡ್
ಕೀಬೋರ್ಡ್ : ಕೃಷ್ಣ ಉಡುಪ
ತಬಲ: ಎಂ.ಸಿ.ಶ್ರೀನಿವಾಸ್
ಕೊಳಲು: ವಸಂತ್

ಆಹ್ವಾನಿತರು: ಈ ಕಾರ್ಯಕ್ರಮಕ್ಕೆ ರಾಜು ಅನಂತಸ್ವಾಮಿಯವರ ಒಡನಾಟದಲ್ಲಿದ್ದ ಹಲವು ಗೆಳೆಯರನ್ನು ಆಹ್ವಾನಿಸಲಾಗಿದೆ. ಅವರು ರಾಜು ಅನಂತಸ್ವಾಮಿಯವರ ಜೊತೆಗಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮ ಸಹಯೋಗ: ಲಹರಿ ಆಡಿಯೋ ಸಂಸ್ಥೆ ಹಾಗು ಸಂವಾದ ಡಾಟ್ ಕಾಂ(samvaada.com)

ಹೆಚ್ಚಿನ ವಿವರಗಳಿಗೆ ವಿನಯ್ ಶೇಷಾದ್ರಿ(ಕಲೆ ತಂಡದ ನಿರ್ದೇಶಕ)ಯನ್ನು 98860 84111 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

English summary
Lahari Audio Company and Samvaada.com have jointly organised a musical tribute program to late Musician Raju Ananthaswamy on Jan.17 at KH Kala Soudha, Bangalore. Kale and group will present musical nite program by name 'nenapige meeriddu'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X