ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಟಾಂಗ್ ನೀಡಿದ ಹಾಲುಮತದ ಸ್ವಾಮೀಜಿ

By Srinath
|
Google Oneindia Kannada News

eshwarappa-never-conspired-to-send-bsy-to-jail
ದೇವದುರ್ಗ, ಜ14: 'ಹಾಲುಮತದವರು ಹಾಲಿನಷ್ಟೆ ಪವಿತ್ರ, ಜೈಲಿಗೆ ಕಳಿಸುವಂತ ಕೆಲಸವನ್ನು ಅವರು ಮಾಡುವುದಿಲ್ಲ' ಎಂದು ಯಡಿಯೂರಪ್ಪಗೆ ನಿರಂಜನಾನಂದಪುರಿ ಸ್ವಾಮೀಜಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 'ನನ್ನನ್ನು ಜೈಲಿಗೆ ಕಳಿಸಿದ್ದೇ ಈಶ್ವರಪ್ಪ' ಎಂದು ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಇತ್ತೀಚೆಗೆ ಕೋಲಾಹಲವೆಬ್ಬಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

'ಪತ್ರಿಕೆಗಳಲ್ಲಿ ಈ ಕುರಿತು ಹೇಳಿಕೆಗಳನ್ನು ನೋಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೆಸರನ್ನು ಹೇಳದೆ ಹಾಲುಮತದ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡು ನಿರಂಜನಾನಂದಪುರಿ ಸ್ವಾಮೀಜಿ ಈ ರೀತಿ ಅಭಿಪ್ರಾಯಪಟ್ಟರು.

'ಹಾಲುಮತದವರು ಜೀವ ಕೊಡುತ್ತಾರೆ ವಿನಃ ಜೈಲಿಗೆ ಹಾಕಿಸುವುದಿಲ್ಲ' ಎಂದಿರುವ ನಿರಂಜನಾನಂದಪುರಿ ಸ್ವಾಮೀಜಿ, 'ಈಶ್ವರಪ್ಪ ಅವರಲ್ಲಿ ಸಮರ್ಥ ನಾಯಕತ್ವದ ಗುಣ ಇದೆ. ಅವರು ಮುಂದೆ ಮುಖ್ಯಂಮತ್ರಿಗಳಾಬೇಲು ಎಂದು ಆಶಿಸಿದರು.

ಕಿತ್ತೂರು ರಾಣಿ ಚೆನ್ನಮ್ಮಳನ್ನು ಬ್ರಿಟಿಷರು ಜೈಲಿನಲ್ಲಿ ಹಾಕಿದಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಮ್ಮ ಜೀವವನ್ನೇ ಒತ್ತೆ ಇಟ್ಟು ಬಿಡುಗಡೆಗೆ ಪ್ರಯತ್ನಪಟ್ಟಿದ್ದು ಎಲ್ಲರಿಗೂ ತಿಳಿದ ವಿಷಯ ಎಂದರು.

English summary
Karnataka BJP leadership Niranjananandapuri swamiji has said on Jan 14 in Devadurga that KS Eshwarappa who belongs ti Halumatha community never conspired to send BS Yeddyurappa to jail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X