ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಬರಿಗೆ ಬಿದ್ದ ಸುಬ್ರಮಣ್ಯ ಸ್ವಾಮಿ ಜಾಮೀನಿಗೆ ಮೊರೆ

By Srinath
|
Google Oneindia Kannada News

2g-scam-subramanian-swamy-seeks-bail
ನವದೆಹಲಿ, ಜ.13: 2ಜಿ ಹಗರಣದಲ್ಲಿ ಖುದ್ದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ವಿರುದ್ಧವೇ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷ್ಯವನ್ನೊದಗಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಅವರು ಬಂಧನದ ಭೀತಿಗೊಳಗಾಗಿದ್ದು, ದೆಹಲಿ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗೆ ಮನವಿ ಸಲ್ಲಿಸಿದ್ದಾರೆ.

ಗೃಹ ಸಚಿವ ಚಿದಂಬರಂ ಅವರ ಕುಮ್ಮಕ್ಕಿನಿಂದ ದೆಹಲಿ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ತಮಗೆ ಜಾಮೀನು ನೀಡಬೇಕು ಎಂದು ಸ್ವಾಮಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಚಿದಂಬರಂ ಅವರು 2 ಜಿ ಹರಾಜಿನಲ್ಲಿ 2 ಕಂಪನಿಗಳ ಪರ ವಹಿಸಿ ಸರಿಯಾಗಿ 4 ವರ್ಷಗಳ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಸ್ವಾಮಿ ಅದನ್ನು ಸಹ ಸಾಕ್ಷ್ಯವಾಗಿ ಕೋರ್ಟಿಗೆ ಸಲ್ಲಿಸಿದ್ದಾರೆ. ಜತೆಗೆ ಚಿದಂಬರಂ ಅವರು ಇನ್ನೂ ಅನೇಕ ಬಲವಾದ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಈ ಸಾಕ್ಷ್ಯಗಳನ್ನು ಆಧರಿಸಿ ಚಿದಂಬರಂ ಅವರನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಸ್ವಾಮಿ ಕೋರಿದ್ದಾರೆ.

English summary
Janta Party President Subramanian Swamy has moved the Delhi High Court seeking anticipatory bail. Swamy has alleged in his plea that the Delhi Police might arrest him at the behest of Home Minister P Chidambaram, so that he can't depose against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X