ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿ ವಿರೋಧಿ ಟಪಾಲ್ ಗಣೇಶ್ ಬಿಜೆಪಿಗೆ ಟಾಟಾ
ಜನವರಿ 16ರಂದು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿರುವ ಗಣೇಶ್, ಮುಂದೆ ಯಾವ ಪಕ್ಷ ಸೇರಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.
'ಬಿಜೆಪಿಯಲ್ಲಿ ಜಾತಿ ರಾಜಕಾರಣ ಮಿತಿಮೀರಿದೆ. ನಿಷ್ಠಾವಂತರಿಗೆ ಇಲ್ಲಿ ಸ್ಥಾನವಿಲ್ಲ. ಭ್ರಷ್ಟರಿಗೆ ಮಣೆ ಹಾಕಲಾಗುತ್ತದೆ ಎಂದು ದೂರಿರುವ ಟಪಾಲ್, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ರೆಡ್ಡಿ ಸೋದರರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹಿಂಜರಿಯುತ್ತಿದೆ. ಅಕ್ರಮ ಗಣಿಗಾರಿಕೆಯನ್ನು ಖಂಡಿಸಲೂ ಪಕ್ಷ ಮುಂದಾಗಿಲ್ಲ. ಇದು ನನಗೆ ವಿಪರೀತ ಮುಜುಗರ ತಂದಿದೆ' ಎಂದು ಕಾರಣ ಹೇಳಿ ಬಿಜೆಪಿ ಮನೆಯಿಂದ ಅವರು ಕಾಲು ಹೊರಗಿಟ್ಟಿದ್ದಾರೆ.
ಪ್ರಮುಖ ಗಣಿ ಉದ್ಯಮಿ, ರೆಡ್ಡಿಗಳ ಕಡು ವಿರೋಧಿ ಟಪಾಲ್ ಗಣೇಶ್ ಅವರು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಉಪ ಚುನಾವಣೆ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಮಾಗಿಯ ಚಳಿಯಲ್ಲಿ ಕಮಲ ಪಕ್ಷವನ್ನು ಅಪ್ಪಿಕೊಂಡಿದ್ದರು.
Comments
ಅಕ್ರಮ ಗಣಿಗಾರಿಕೆ ಬಳ್ಳಾರಿ ಟಪಾಲ್ ಗಣೇಶ್ ಕೆಎಸ್ ಈಶ್ವರಪ್ಪ ಶ್ರೀರಾಮುಲು ಉಪ ಚುನಾವಣೆ ಬಿಜೆಪಿ ಜಿಲ್ಲಾಸುದ್ದಿ ಲೋಕಾಯುಕ್ತ ವಿವಾದ sreeramulu bjp district news lokayukta corruption tapal ganesh
English summary
Janardhana Reddy Arch Rival Tapal Ganesh who joined BJP during Bellary by polls recently has decided to quit BJP.
Story first published: Friday, January 13, 2012, 14:40 [IST]