ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆಹರ್ ಸಿಂಗ್ ಮನೆಗೆ ಧಾವಿಸಿದ ಶೋಭಾ ಕರಂದ್ಲಾಜೆ

By Srinath
|
Google Oneindia Kannada News

bjp-leadership-leaders-meet-in-lehar-singh
ಬೆಂಗಳೂರು, ಜ.11: ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇಂದು ಸಂಜೆ ಕೇಶವ ಶಿಲ್ಪಾದಲ್ಲಿ ನಿಗದಿಯಾಗಿರುವ ಆರ್ಎಸ್ಎಸ್ ಬೈಠಕ್ ಗೂ ಮುನ್ನ ಆರ್ಎಂವಿ ಎರಡನೇ ಹಂತದಲ್ಲಿರುವ ಲೆಹರ್ ಸಿಂಗ್ ಅವರ ಮನೆಯಲ್ಲಿ ಇದೀಗ ಪೂರ್ವಭಾವಿ ಸಭೆ ನಡೆದಿದೆ.

ಯಡಿಯೂರಪ್ಪ-ಈಶ್ವರಪ್ಪ ನಡುವಣ ಕಂದಕದಲ್ಲಿ ಯಡಿಯೂರಪ್ಪನವರ ಆತ್ಮೀಯ ಬಂಟ ಲೆಹರ್ ಸಿಂಗ್ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ವಿಧಾನ ಪರಿಷತ್ ಸದಸ್ಯ ಲೆಹರ್ ಅವರು ಸಂಧಾನಕಾರರಾಗಿ ಈ ಸಭೆ ಆಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಅವರು ಈ ಸಭೆಯಲ್ಲಿ ಕಾಣಿಸಿಕೊಳ್ಳದೆ ಅಜ್ಞಾತರಾಗಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ತಂದಿದೆ.

ಸಭೆಗೆ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಆರ್ ಅಶೋಕ್ ಮುಂತಾದ ಪ್ರಮುಖ ನಾಯಕರು ಆಗಮಿಸಿದ್ದಾರೆ. ಆರ್ಎಸ್ಎಸ್ ನಾಯಕರೂ ಈ ಸಭೆಯಲ್ಲಿ ಪಾಲ್ಗೊಂಡಿರುವುದು ಕುತೂಹಲ ಮೂಡಿಸಿದೆ.

ಈ ಮಧ್ಯೆ, ವಿವಾದದ ಕೇಂದ್ರ ವ್ಯಕ್ತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ದೃಢ ನಿರ್ಣಯಗಳನ್ನು ಈಗಾಗಲೇ ಲೆಹರ್ ಸಿಂಗ್ ಅವರಿಗೆ ತಿಳಿಸಿದ್ದು, ತಮ್ಮ ಪರವಾಗಿ ಅದನ್ನು ಬೈಠಕ್ ನಲ್ಲಿ ತಿಳಿಸುವಂತೆ ಲೆಹರ್ ಗೆ ಹೇಳಿರುವುದಾಗಿ ತಿಳಿದುಬಂದಿದೆ.

ಯಡಿಯೂರಪ್ಪ-ಈಶ್ವರಪ್ಪ ನಡುವಣ ಕಂದಕವನ್ನು ಮುಚ್ಚಲು ಬಿಜೆಪಿ ಮತ್ತು ಸಂಘ ಪರಿವಾರದ ಹಿರಿಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ ಲೆಹರ್ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ. ಇಲ್ಲಿನ ನಿರ್ಧಾರವೇ ಬಹುತೇಕ ಅಂತಿಮವಾಗುವ ಲಕ್ಷಣಗಳಿವೆ.

English summary
Karnataka BJP leadership: Karnataka BJP leadership Leaders meet in Lehar Singh residence, except BS Yeddyurappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X