'ಆರ್ಥಿಕ ಭಯೋತ್ಪಾದಕ' ರೆಡ್ಡಿ ಗಳಿಸಿದ್ದು 4300 ಕೋಟಿ: ಸಿಬಿಐ
ಜನಾರ್ದನ ರೆಡ್ಡಿಯನ್ನು ಮೊದಲ ಆರೋಪಿಯಾಗಿಯೂ ನಂತರದಲ್ಲಿ ಅವರ ಭಾವ ಶ್ರೀನಿವಾಸ ರೆಡ್ಡಿ, ಹಿರಿಯ ಮಾಜಿ ಅಧಿಕಾರಿಗಳಾದ ರಾಜಗೋಪಾಲ ರೆಡ್ಡಿ ಮತ್ತು ದಿ. ಲಿಂಗಾರೆಡ್ಡಿ ಅವರನ್ನು ಹೆಸರಿಸಿದೆ. ಈ ಮಧ್ಯೆ, ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರ ವಿರುದ್ಧವೂ ಪ್ರಕರಣದ ಸಂಬಂಧ ಆರೋಪಪಟ್ಟಿ ದಾಖಲಿಸಲು ಅನುಮತಿ ಕೋರಿ ಕೇಂದ್ರ ಸಕಾರಕ್ಕೆ ಸಿಬಿಐ ಮನವಿ ಮಾಡಿಕೊಂಡಿದೆ.
ಓಬಳಾಪುರಂ ಮೈನಿಂಗ್ ಕಂಪನಿಯ ಸ್ಥಳೀಯ ವಹಿವಾಟು ಮತ್ತು ರಫ್ತು ಬಾಬತ್ತಿನಲ್ಲಿ 2007-10ರ ಅವಧಿಯಲ್ಲಿ ಒಟ್ಟು 4,300 ಕೋಟಿ ರುಪಾಯಿ ಗಳಿಸಲಾಗಿದೆ ಎನ್ನುತ್ತಿದೆ ಸಿಬಿಐ ಚಾರ್ಜ್ ಷೀಟ್. ಈ ಹಣದಿಂದಲೇ ರೆಡ್ಡಿ ಹೆಲಿಕಾಪ್ಟರ್ ಖರೀದಿಸಿದ್ದು ಎಂದು ಸಿಬಿಐ ಉಲ್ಲೇಖಿಸಿದೆ.
ರೆಡ್ಡಿಗೆ ದೈವದತ್ತ ವರವಾದ ಬೀಜಿಂಗ್ ಒಲಿಂಪಿಕ್ಸ್: ಜನಾರ್ದನ ರೆಡ್ಡಿಗೆ ಚೀನಾದ ಬೀಜಿಂಗ್ ಒಲಿಂಪಿಕ್ಸ್ ದೈವದತ್ತ ವರವಾಗಿ ಪರಿಣಮಿಸಿತು. ಈ ಸುಭಿಕ್ಷ ಕಾಲದಲ್ಲೇ ಆತ ಆ ಪಾಟಿ ದುಡ್ಡು ಕೊಳ್ಳೆ ಹೊಡೆದಿದ್ದು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನೋಡಿ, 2007-08ರಲ್ಲಿ ಕಬ್ಬಿಣದ ಅದಿರು ಬೆಲೆ ಟನ್ನಿಗೆ 3,968 ರುಪಾಯಿಯಿತ್ತು. ಅದೇ ಟನ್ ಅದಿರಿನ ಬೆಲೆ 2008ರ ನಂತರ 1,758 ರುಪಾಯಿಗೆ ಕುಸಿದುಬಿತ್ತು. ಅಂದರೆ 2007-08ರ ಅವಧಿಯಲ್ಲಿ ರೆಡ್ಡಿ ಓಬಾಪುಂ ಕಂಪನಿ 2,316 ಕೋಟಿ ರುಪಾಯಿ ಗುಡ್ಡೆ ಹಾಕಿತು. ಇದೆಲ್ಲ ಬೀಜಿಂಗ್ ಒಲಿಂಪಿಕ್ಸ್ ಪ್ರಭಾವ ಎಂದು ಸಿಬಿಐ ಆರೋಪಪಟ್ಟಿ ಕಟ್ಟಿದೆ.