ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠಕ್ಕೆ ಬೆನ್ನು ತಿರುಗಿಸಿದ ದೈವ ಭಕ್ತ ಯಡ್ಡಿ

By Mahesh
|
Google Oneindia Kannada News

BS Yeddyurappa
ಮಂಗಳೂರು, ಜ.5: ಬಲ್ಲ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಶಾಶ್ವತವಾಗಿ ಮುಗಿಸಲು ಖುದ್ದು ಸದಾನಂದ ಗೌಡ ಮತ್ತು ಟೀಂ ಈ ಯಾಗ ನಡೆಸಿದೆಯಂತೆ.

ಮಠದ ಸ್ವಾಮಿ ರಾಜಶೇಖರಾನಂದ ಪಾರುಪಥ್ಯ ವಹಿಸಿದ್ದರು. ಫಲಿಮಾರು ಸ್ವಾಮೀಜಿಯಿಂದ ದೀಕ್ಷೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ವಾಮಚಾರದಲ್ಲೂ ಇವರು ಎತ್ತಿದ ಕೈ ಎಂಬ ಸುದ್ದಿ ಯಡಿಯೂರಪ್ಪರ ಕಿವಿ ಮೇಲೆ ಬಿದ್ದಿದ್ದೇ ತಡ, ಯಡಿಯೂರಪ್ಪ ಅವರ ಮೈ ನಡುಕ ಹೆಚ್ಚಿದೆ.

ಯಾಗಕ್ಕೆ ಯಾರು ಹೋಗಬೇಡಿ ಎಂದು ಯಡಿಯೂರಪ್ಪ ತಮ್ಮ ಅಪ್ತರಿಗೆ ಸೂಚಿಸಿದ್ದಾರೆ. ಈ ವಿಷಯ ತಿಳಿದ ಮುರುಗೇಶ ನಿರಾಣಿ 'ಕರಾವಳಿ ವಾಣಿಜೋದ್ಯಮದ ಶೃಂಗ ಸಭೆ'ಯಲ್ಲಿ ಭಾಗವಹಿಸಿ ಅಲ್ಲಿಂದ ನೇರ ರಾಜಧಾನಿ ಕಡೆ ತೆರಳಿದರು.

ಯಾಗಕ್ಕೆ ಡಿವಿಎಸ್ ಸಾರಥ್ಯ: ಯಡಿಯೂರಪ್ಪ ಕೈಕೊಡುತ್ತಾರೆಂಬ ಸುದ್ದಿ ತಿಳಿದ ಕೂಡಲೇ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಆಗಮಿಸಿದ ಸಿಎಂ ಡೀವಿ ನೇರವಾಗಿ ಯಾಗ ಶಾಲೆಗೆ ತೆರಳಿದರು.

ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಸಚಿವರಾದ ವಿ ಎಸ್ ಆಚಾರ್ಯ, ಕೃಷ್ಣಪಾಲೇಮಾರ್, ಉಪಸಭಾಪತಿ ಯೋಗೀಶ್ ಭಟ್, ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತಿತರರು ಅವರಿಗೆ ಸಾಥ್ ನೀಡಿದ್ದರು.

'ಮುಖ್ಯಮಂತ್ರಿ ಸ್ಥಾನದ ಬಗ್ಗೆ ಗೊಂದಲ ಉಂಟಾಗಿರುವ ಸಂದರ್ಭದಲ್ಲಿ ಈ ಯಾಗ ಆತ್ಮಶಕ್ತಿ ಹೆಚ್ಚಿಸಿದೆ. ರಾಜ್ಯ ಹಾಗೂ ದೇಶಕ್ಕೆ ಒಳ್ಳೆಯದಾಗಲಿ ದೇವರಲ್ಲಿ ಪ್ರಾರ್ಥಿಸಿದ್ದೇನೆ.ಈ ಯಾಗದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ' ಎಂದು ಸಿಎಂ ಸದಾನಂದ ಗೌಡರು ಹೇಳಿದ್ದು ನಾನಾ ಅರ್ಥಗಳನ್ನು ನೀಡಿದ್ದಂತೂ ಸುಳ್ಳಲ್ಲ.

English summary
Former CM Yeddyurappa purposefully skips Yaga and Vajradehi Mahotsava held at Gurupura Vajradehi math in Udupi. But, CM DV Sadananda Gowda attends the yaga and offers Poornahuti. It is reported that this yaga is to destroy the political career of Yeddyurappa who recent performed Vajapeya Soma yaga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X