ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕ ಕೊಳ್ಳಿರಿ
ಗುರುವಾರ ಬೆಳಗ್ಗೆ 11ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಪುಸ್ತಕ ಮೇಳ ಉದ್ಘಾಟಿಸಿದರು. ಪ್ರಾಧಿಕಾರ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.
ಮೇಳ ನಡೆಯುವ ಪ್ರತಿದಿನ ಬೆಳಗ್ಗೆ 10:30ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ರಾಜ್ಯದ 70 ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ಮೇಳದಲ್ಲಿ 68ಕ್ಕೂ ಅಧಿಕ ಮಳಿಗೆ ಇದೆ.
ಎಲ್ಲ ಪ್ರಕಾಶಕರು ಕನಿಷ್ಠ ಶೇ.25ರಷ್ಟು ರಿಯಾಯಿತಿ ನೀಡುವುದು ಕಡ್ಡಾಯ ಎಂದು ನಿಯಮ ಮಾಡಲಾಗಿದೆ. ಕೆಲವು ವಿ.ವಿ.ಗಳ ಪ್ರಸರಾಂಗಗಳು ಮತ್ತು ಸಂಸ್ಥೆಗಳು ಶೇ.50ರಷ್ಟು ರಿಯಾಯಿತಿಯನ್ನು ನೀಡಲು ಮುಂದೆ ಬಂದಿವೆ.
ಕಳೆದ ವರ್ಷ ನಡೆದ ವಿಶೇಷ ರಿಯಾಯಿತಿ ಪುಸ್ತಕ ಮೇಳದಲ್ಲಿ ಒಂದು ಕೋಟಿ ರೂ.ಗಳಿಗೂ ಹೆಚ್ಚಿನ ವ್ಯವಹಾರವಾಗಿದೆ. ಒಟ್ಟು 6 ಪುಸ್ತಕ ಮೇಳಗಳನ್ನು ನಡೆಸಲಾಗಿದೆ ಎಂದು ಸಿದ್ದಲಿಂಗಯ್ಯ ಹೇಳಿದರು.
Comments
ಕನ್ನಡ ಪುಸ್ತಕ ಸಿದ್ದಲಿಂಗಯ್ಯ ರವೀಂದ್ರ ಕಲಾಕ್ಷೇತ್ರ ಬೆಂಗಳೂರು kannada books ravindra kalakshetra bangalore siddalingaiah
English summary
The Kannada Book Authority has organised Kannada book Fair at Ravindra Kalashetra, Bangalore. The four-day long book mela startes from Jan.5. Book lovers can purchase variety of books from 70 different publishers at 68 stalls between 10.30 am and 8 pm said president Dr Siddalingaiah.
Story first published: Thursday, January 5, 2012, 16:26 [IST]