ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುಗೆ ಚುನಾವಣೆ ಗೆಲ್ಲುವ ಆಕಾಂಕ್ಷೆಯಿಂದ ನನಗೆ ಕಳಂಕ

By Srinath
|
Google Oneindia Kannada News

madhu-eyes-elections-maligns-me-kumar-bangarappa
ಕುಮಟಾ, ಜ.4: ಮಾಜಿ ಸಚಿವ ಕುಮಾರ ಬಂಗಾರಪ್ಪ ಮಂಗಳವಾರ ಕುಮಟಾ ತಾಲ್ಲೂಕಿನ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಪರ ಕಾರ್ಯ ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಸಂತ ಕುಮಾರ ಬಂಗಾರಪ್ಪ ಅವರು ನನ್ನ ತಮ್ಮ ಮಧು ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಏಕೈಕ ಉದ್ದೇಶದಿಂದ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನಿಡುತ್ತಿದ್ದಾನೆ. ಆ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾನೆ. ಅವರ ಎಲ್ಲ ಕುಹಕಗಳಿಗೂ ನೊಂದು ಹೃದಯದಲ್ಲೇ ದುಃಖ ಬಚ್ಚಿಟ್ಟುಕೊಂಡಿದ್ದೇನೆ' ಎಂದು ಕುಮಾರ್ ಅಲವತ್ತುಕೊಂಡರು.

'ತಂದೆಯ ಆತ್ಮಕ್ಕೆ ಶಾಂತಿ ಬಯಸಿ ನಾನು ಕೈಕೊಂಡ ಅಪರ ಕಾರ್ಯಗಳ ಬಗ್ಗೆ ನನಗೆ ತೃಪ್ತಿ ಉಂಟಾಗಿದೆ' ಎಂದು ಅವರು ಪತ್ರಕರ್ತರಿಗೆ ತಿಳಿಸಿದರು. ಕುಮಾರ ಬಂಗಾರಪ್ಪ ಅವರೊಂದಿಗೆ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಡಾ. ನಾರಾಯಣಪ್ಪ, ಕುಮಟಾ ಮಾಜಿ ಶಾಸಕ ಕೆ.ಎಚ್. ಗೌಡ, ಮಾಜಿ ಶಾಸಕರುಗಳಾದ ವಿರೂಪಾಕ್ಷಪ್ಪ, ಸಿ.ವಿ. ಹುಲಿಮನೆ ಪಾಲ್ಗೊಂಡಿದ್ದರು.

English summary
Kumar Bangarappa who performed his father Bangarappa's last rites on Jan 3 at Gokarna has said that his younger brother Madhu has set his eyes on next elections. As such he is trying to maligns me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X