ದಾರಿ ತಪ್ಪಿದ ಕುಮಾರನಿಗೆ ಬಂಗಾರಪ್ಪ ಕುಟುಂಬದಲ್ಲಿನ್ನು ಸ್ಥಾನವಿಲ್ಲವೇ!?
ನೋಡಿ. ನನ್ನಣ್ಣ ಕೊನೆಯ ಅವಕಾಶ ಎಂಬಂತೆ ಈಗ ರಂಪ ರಾಮಾಯಣ ಮಾಡಿದ್ದಾನೆ. ಆದರೆ ಅವನಿಗೆ ಕುಟುಂಬದೊಳಕ್ಕೆ ಮರುಪ್ರವೇಶಿಸುವುದು ಬೇಡವಾಗಿದೆ. ಒಂದಷ್ಟು ಅನುಕಂಪ ಗಿಟ್ಟಿಸುವ ನಾಟಕ ಇದಾಗಿದೆ. ಕುಟುಂಬದಲ್ಲಿ ಉಳಿದವರಿಗೆ ಅಪಮಾನ ಮಾಡುವ ಇರಾದೆ ಅವನದಾಗಿದೆ.
ಅಪ್ಪ ಬದುಕಿದ್ದಾಗಲೇ ಇದಕ್ಕೆ ಪ್ರಯತ್ನಿಸಿ ಸೋತರು. ಇನ್ನು ಈಗಾವ ಆದೀತೇ? ಅಷ್ಟಕ್ಕೂ ಅಪ್ಪನ ಸ್ಥಾನದಲ್ಲಿ ಈಗ ಅಮ್ಮ ಇದ್ದಾರೆ. ಕುಮಾರನನ್ನು ಮತ್ತೆ ಮನೆಯೊಳಕ್ಕೆ ಬಿಟ್ಟುಕೊಳ್ಳುವುದರ ಬಗ್ಗೆ ನಮ್ಮ ತಾಯಿ ಶಕುಂತಲಮ್ಮ ಅವರ ತೀರ್ಮಾನವೇ ಅಂತಿಮ. ಅವರ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಹೇಳಿದ ಉಸುರಿನಲ್ಲೇ ಕುಮಾರ ಮತ್ತೆ ವಾಪಸಾಗುವುದು ಬೇಡ.
ಹೇಟ್ ಮೇಲ್: ಅಷ್ಟೇ ಅಲ್ಲ. ಈ ಕಹಿಭಾವ ಅಬೋಧ ಮೊಮ್ಮಕ್ಕಳವರೆಗೂ ಹಬ್ಬುತ್ತಿದೆ. ನಮ್ಮಣ್ಣನ ಇಬ್ಬರೂ ಗಂಡು ಮಕ್ಕಳು we will never forgive u ಎಂದು ಇತರೆ ಮೊಮ್ಮಕ್ಕಳಿಗೆ ಎಸ್ಎಂಎಸ್ ಕಳಿಸುತ್ತಿದ್ದಾರೆ ಎಂದು ಮಧು ತಮ್ಮ ದುಃಖ ತೋಡಿಕೊಂಡರು.
ನೂರು ಜನ್ಮಕೂ ನೂರಾರು ಜನ್ಮಕೂ ನನ್ನ ಅಪ್ಪ-ಅಮ್ಮ ಇವರೇ ಆಗಿರಲಿ. ಆದರೆ ಇವನಂತಹ (ವಸಂತ ಕುಮಾರ) ಮಕ್ಕಳು ನಾಡಿನ ಯಾವುದೇ ತಂದೆ-ತಾಯಿಗೂ ಬೇಡ ಎಂದು ಮಧು ಕಹಿಭಾವದೊಂದಿಗೆ ಮಾತು ಮುಗಿಸಿ, ನಿರಾಳರಾದರು.