ಬಂಗಾರಪ್ಪ ಮೇಲಿನ ಭಕ್ತಿ, ಗೌರವ ಈಗೇಕೆ ಕುಮಾರ?
ಈ ಮಧ್ಯೆ, ಬಂಗಾರಪ್ಪನವರ ಹಿರಿಯ ಪುತ್ರನಾಗಿ ಅವರ ಸಮಾಧಿ ಪೂಜೆ ಮಾಡಲು ಕುಟುಂಬದವರು ನನಗೆ ಅವಕಾಶ ನೀಡಲಿಲ್ಲ ಎಂದು ವಸಂತ ಕುಮಾರ ಬಂಗಾರಪ್ಪ ಕ್ರೋಧಗೊಂಡು ರಂಪ ರಾಮಾಯಣ ಮಾಡಿರುವುದರ ಬಗ್ಗೆ ಬೀದಿ ಜಗಳ ಕಾಯದೆ ಟಿವಿ9 ಮತ್ತು ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಮಧುಚಂದ್ರ ಬಂಗಾರಪ್ಪ ನಿಜಕ್ಕೂ ಪ್ರಬುದ್ಧರಾಗಿ ಉತ್ತರ ನೀಡಿದ್ದಾರೆ.
ಬಂಗಾರಪ್ಪ ಕುಟುಂಬದ ಜತೆ ಸಂಬಂಧ ಕಡಿದುಕೊಂಡು ದೂರವಾದ ನಂತರ 10 ವರ್ಷಗಳಲ್ಲಿ ವಸಂತ ಕುಮಾರ ಬಂಗಾರಪ್ಪ ಏನೆಲ್ಲ ಮಾಡಿದರು ಎಂಬುದನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಈ 10 ವರ್ಷಗಳಲ್ಲಿ ಕುಟುಂಬದಿಂದ ದೂರವಾದ ವಸಂತನನ್ನು ಮತ್ತೆ ಒಂದುಗೂಡಿಸಲು ಮಾಮಾ (ಬಂಗಾರಪ್ಪ ಅವರನ್ನು ಕುಟುಂಬದವರು ಪ್ರೀತಿಯಿಂದ ಕರೆಯುವುದು ಹೀಗೇ) ಅನೇಕ ಬಾರಿ ಯತ್ನಿಸಿ, ಸೋತರು. ವಸಂತ ಮರಳಿ ಬರಲೇ ಇಲ್ಲ.
ಬದಲಿಗೆ ಇನ್ನಷ್ಟು ದೂರವಾಗುತ್ತಾ ಸಾಗಿದ. ಜತೆಗೆ ಮಾನಸಿಕವಾಗಿಯೂ ಸಾಕಷ್ಟು ಕಿರಿಕಿರಿ ಮಾಡಿದ. ಆಗಿಲ್ಲದ ಅಪ್ಪನ ಮೇಲಿನ ಭಕ್ತಿ, ಗೌರವಗಳು ಈಗ ಅವರ ಮರಣದ ನಂತರ ಏಕೆ. ಇದೆಲ್ಲ ಕುಮಾರನ ಬೂಟಾಟಿಕೆ ಎಂದು ಮಧು ಅಣ್ಣನಿಗೆ ಜಾಡಿಸಿದ್ದಾರೆ. (ಮುಂದೆ ಓದಿ ...)