ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕತ್ವದ ಬಗ್ಗೆ ಇನ್ನು ಮಾತಿಲ್ಲ: ಯಡಿಯೂರಪ್ಪ ಮೌನದ ಮರ್ಮವೇನು?

By Srinath
|
Google Oneindia Kannada News

bjp-leadership-bsy-keeps-mum-says-all-is-well
ಬೆಳಗಾವಿ, ಡಿ. 25: ಇತ್ತೀಚೆಗೆ ಒಂದೇ ಸಮನೆ ರಾಜ್ಯ ಬಿಜೆಪಿಯ ಪಕ್ಷಾತೀತ ನಾಯಕ ತಾನೇ ಎಂದು ಹಕ್ಕು ಪ್ರತಿಪಾದಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಇದೀಗ ಸುರಕ್ಷತೆಯ ದೃಷ್ಟಿಯಿಂದ ಚಿಪ್ಪಿನೊಳಗೆ ನುಸುಳಿಕೊಂಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಬಗ್ಗೆ ಇನ್ನು ಮುಂದೆ ಮಾತನಾಡುವದಿಲ್ಲ. ಅದೇನಿದ್ದರೂ ಪಕ್ಷದ ಹೈಕಮಾಂಡಿಗೆ ಬಿಟ್ಟ ವಿಚಾರ. ಇನ್ನೇನಿದ್ದರೂ ಪಕ್ಷದ ಸಂಘಟನೆ ಮತ್ತು ರಾಜ್ಯದ ಅಭಿವೃದ್ಧಿ ಕೆಲಸದ ಬಗ್ಗೆ ಅಷ್ಟೇ ಮಾತು ಎಂದು ಹೊಣೆಗಾರಿಕೆಯ ಮಾತನ್ನಾಡಿದ್ದಾರೆ.

ಯಡಿಯೂರಪ್ಪ ಮೌನದ ಮರ್ಮವೇನು?: ಈ ಮೂಲಕ ರಾಜ್ಯದಲ್ಲಿ ಪಕ್ಷದ ನಾಯಕತ್ವ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ. ಸ್ಥಾನಮಾನ ಶಾಶ್ವತ ಆಲ್ಲ. ಇದಕ್ಕಾಗಿ ತಾವು ಎಂದಿಗೂ ಚಿಂತೆ ಮಾಡಿದವರಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸದಾನಂದಗೌಡರಿಗೆ ಮೊದಲಿನ ರೀತಿಯಲ್ಲೇ ಸಹಕಾರ ನೀಡುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮೇಲಿಂದ ಮೇಲೆ ಈ ಪ್ರಶ್ನೆ ಕೇಳಿದರೂ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದರು. ಆದರೆ ಈ ಮೌನದ ಒಳಗುಟ್ಟು ಮಾತ್ರ ಆರ್ಥವಾಗಲಿಲ್ಲ.

English summary
Karnataka BJP leadership: The ex chief minister BS Yeddyurappa keeps mum says all is well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X