ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರವೇ ಗೌಡರು ಪುಸ್ತಕ ಬರೆದಿದ್ದಾರೆ, ಬರ್ತೀರಲ್ಲ?

By Prasad
|
Google Oneindia Kannada News

T A Narayana Gowda
ಬೆಂಗಳೂರು, ಡಿ. 22 : ನೇರಾನೇರ ನುಡಿಗೆ ಹೆಸರಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಬರೆದಿರುವ 'ನೇರನುಡಿ' ಪುಸ್ತಕ ಡಿ.26, ಸೋಮವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಪುಸ್ತಕ ಪ್ರಸವವನ್ನು ಸುಲಲಿತಗೊಳಿಸುತ್ತಿರುವವರು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು.

ಹುಕ್ಕೇರಿ ಹಿರೇಮಠ ಗುರುಶಾಂತೇಶ್ವರ ಸಂಸ್ಥಾನದ ಶ್ರೀಶ್ರೀಶ್ರೀ ಷಟಸ್ಥಳಪರಬ್ರಹ್ಮಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹ ಸಚಿವ ಆರ್ ಅಶೋಕ್ ಮತ್ತು ಅಧ್ಯಕ್ಷತೆಯನ್ನು ಟಿ.ಎ. ನಾರಾಯಣ ಗೌಡರು ವಹಿಸುತ್ತಿದ್ದಾರೆ.

ಡಿ.26ರ ಬೆಳಿಗ್ಗೆ 10.30ಕ್ಕೆ ಟೌನ್ ಹಾಲ್ ಬಳಿಯಿರುವ, ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕರವೇ ನಲ್ನುಡಿ ಮಾಸಪತ್ರಿಕೆ ಆಯೋಜಿಸಿದ್ದ ಕರವೇ ನಲ್ನುಡಿ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ.

ಪ್ರಶಸ್ತಿ ಪ್ರದಾನವನ್ನು 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಮಾಡಲಿದ್ದಾರೆ. ಕರವೇ ನಲ್ನುಡಿ ಕುರಿತು ಬೀದರ್ ಬಸವ ಸೇವಾ ಪ್ರತಿಷ್ಠಾನದ ವಚನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ರಂಜಾನ್ ದರ್ಗಾ ಅವರು ನಾಲ್ಕು ನುಡಿಗಳನ್ನು ಆಡಲಿದ್ದಾರೆ.

ಬಹುಮಾನ ಗೆದ್ದವರು : ಮೊದಲನೇ ಬಹುಮಾನವನ್ನು ಮಂಜುನಾಥ್ ಲತಾ (ಮೊತ್ತ 25 ಸಾವಿರ), ಎರಡನೇ ಬಹುಮಾನ ಗೌತಮ ಜ್ಯೋತ್ಸ್ನಾ ಜಿ.ಜೆ. (15 ಸಾವಿರ) ಮತ್ತು ಮೂರನೇ ಬಹುಮಾನ ನಾಗಮಂಗಲ ಕೃಷ್ಣಮೂರ್ತಿ (10 ಸಾವಿರ) ಪಡೆದಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ಮೊದಲು 10 ಗಂಟೆಗೆ ಶಿವಮೊಗ್ಗ ಯುವರಾಜ್ ಮತ್ತು ತಂಡದವರಿಂದ ಜಾನಪದ ಭಾವ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

English summary
Karnataka Rakshana Vedike state president T A Narayana Gowda written 'Neranudi' book will be released by Kannadaprabha and Suvarna News editor-in-chief Vishweshwar Bhat on December 26 at Ravindra Kalakshetra, Bangalore. Prizes will be distributed to the winners of Nalnudi short story contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X