ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲಹಂಕ ವಿಶ್ವನಾಥನ ರಾಜಕೀಯ ಗುರು ಯಾರು ಅಂದ್ಕೊಂಡ್ರಿ?

By Srinath
|
Google Oneindia Kannada News

yelahanka-vishwanath-political-guru-bsy
ಬೆಂಗಳೂರು, ಡಿ. 20: ಲೋಕಾಯುಕ್ತ ಪೊಲೀಸರ ದಾಳಿಗೆ ನಲುಗಿರುವ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರ ರಾಜಕೀಯ ಗುರು ಯಾರು ಅಂದ್ಕೊಡ್ರಿ!? ಮತ್ಯಾರೂ ಅಲ್ಲ. ಮಹಾನ್ ಭ್ರಷ್ಟಾಚಾರಿ ಹಣೆಪಟ್ಟಿ ಹೊತ್ತಿರುವ, jail-returned ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ.

ಯಲಹಂಕ ಸುತ್ತಮುತ್ತ ಇವರ ಬೂಟಾಟಿಕೆಯ ಜನಪರ ಸೇವೆಗಳಿಗೆ ಸ್ವತಃ ಯಡಿಯೂರಪ್ಪನವರ ಕೃಪಾಶೀರ್ವಾದ ಇದೆ. HALನ ಈ ಮಾಜಿ ಟಿಕ್ನಿಷಿಯನ್ ರಾಕೆ ಟ್ ವೇಗದಲ್ಲಿ ಚಿಮ್ಮಲು ಸನ್ಮಾನ್ಯ ಯಡಿಯೂರಪ್ಪನವರೇ ಕಾರಣೀಭೂತ. ಕಳೆದ ದಶಕದಲ್ಲಿ ಎಸ್ಆರ್ ವಿಶ್ವನಾಥರ ಅಷ್ಟೂ ಅಕ್ರಮಗಳಿಗೆ ಯಡಿಯೂರಪ್ಪ ಅಸ್ತು ಅಂದಿದ್ದಾರೆ.

ಯಲಹಂಕ ಭಾಗದಲ್ಲಿ ವಿಶ್ವನಾಥ ನಡೆಸುವ ಯಾವುದೇ ರಾಜಕೀಯ ಸಮಾರಂಭವಿರಲಿ ಅದಕ್ಕೆ ಮುಖ್ಯಂತ್ರಿಯಾಗಿ ಯಡಿಯೂರಪ್ಪ ಖುದ್ದು ಹಾಜರಾಗಿ, ಅಧಿಕೃತ ಮುದ್ರೆ ಒತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಈ ಜೋಡಿ ಭರ್ಜರಿಯಾಗಿ ಮಿಂಚಿದೆ.

ಇಂತಿಪ್ಪ ವಿಶ್ವನಾಥ್ ಮೊನ್ನ ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದಕ್ಕೆ ಖುದ್ದು ಯಡಿಯೂರಪ್ಪನವರ ಪುತ್ರರು, ಕುಟುಂಬದವರು ಬಂದು ಆಶೀರ್ವದಿಸಿ ಹೋಗಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರು ಕಣ್ಣಂಚಿನಲ್ಲೇ ವಿಶ್ವನಾಥರ ಸಾಮರ್ಥ್ಯವನ್ನು ಅಳೆದುಕೊಂಡು ಹೋಗಿದ್ದರು.

English summary
On December 19 morning Bangalore Lokayukta police on raided the residence of Yelahanka MLA, S R Vishwanath. Interestingly ex CM BS Yeddyurappa is his political guru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X