ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವೆ ಶೋಭಾ ಜೊತೆ ಯಡಿಯೂರಪ್ಪ ಸೋಮಯಾಗ

By Mahesh
|
Google Oneindia Kannada News

Yeddyurappa in Batwal
ಬಂಟ್ವಾಳ, ಡಿ.19: ರಾಜ್ಯಾಧ್ಯಕ್ಷ ಸ್ಥಾನ ಬೇಡ, ಸಿಎಂ ಪಟ್ಟ ಬೇಕು ಎಂದು ಹಠ ಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ದೇಗುಲ ಯಾತ್ರೆ ಮುಂದುವರೆದಿದೆ.

ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದರ್ಶನ ಪಡೆದ ನಂತರ ಕಟೀಲು ಸಮೀಪದ ಶಿಬರೂರಿಗೆ ತೆರಳಿದ್ದರು. ಬಿಎಸ್ ವೈ ಪಡೆ ಸೋಮವಾರದ ಶುಭ ಮುಹೂರ್ತದಲ್ಲಿ ಕಲ್ಲಡ್ಕದ ನರಹರಿ ಪರ್ವತ ತಪ್ಪಲಿನಲ್ಲಿ ವಾಜಪೇಯ ಸೋಮಯಾಗ ಮಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಅವರ ಬಲ ಬದಿಯಲ್ಲಿ ಸಚಿವೆ ಶೋಭ ಕರಂದ್ಲಾಜೆ ಅವರು ಎಡಬದಿಯಲ್ಲಿ ಶಾಸಕಿ ಭಾರತಿ ಶೆಟ್ಟಿ ಅವರು ಕುಳಿತು ಯಜ್ಞ ಕುಂಡಕ್ಕೆ ಹವಿಸ್ಸು ಅರ್ಪಿಸುತ್ತಿದ್ದಾರೆ.

ಚಿಕ್ಕಮಗಳೂರಿನ ವೇದ ವಿದ್ವಾಂಸ ಕೆ.ಎಸ್. ನಿತ್ಯಾನಂದ ಅವರ ನೇತೃತ್ವದಲ್ಲಿ ಋತ್ವಿಕರು 28 ದಿನಗಳ ಕಾಲದ ಈ ಯಾಗವನ್ನು ಸಕಲ ಭಯಭಕ್ತಿಗಳಿಂದ ಪೂರೈಸಲಿದ್ದಾರೆ.

'ಯಾಗದ ನಂತರ ನನ್ನ ಕಷ್ಟಗಳೆಲ್ಲ ದೂರಾಗಲಿದೆ ಎಂಬ ನಂಬಿಕೆ ನನಗಿದೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.

ಆದರೆ, ವೈದಿಕ ವಿದ್ವಾಂಸರ ಪ್ರಕಾರ ಸ್ವಾರ್ಥಕ್ಕಾಗಿ ಮಾಡುವ ಯಾವ ಯಾಗವೂ ಫಲ ನೀಡುವುದಿಲ್ಲ. ಯಾಗದ ನಿಜವಾದ ಅರ್ಥವೇ ಎಲ್ಲವನ್ನೂ ಅರ್ಪಿಸುವುದು. ಲೋಕ ಕಲ್ಯಾಣಕ್ಕಾಗಿ ಯಾಗ ಮಾಡಿದರೆ ಅಷ್ಟೋ ಇಷ್ಟೋ ಫಲ ಸಿಗುತ್ತದೆ ಎನ್ನಬಹುದು.

ಆದರೆ, ಯಾಗ ಮಾಡಿ ಸಿಎಂ ಆಗುತ್ತೀನಿ ಎನ್ನುವುದು ಎಲ್ಲೋ ಅವರಿಗೆ ಭ್ರಾಂತು ಎಂದು ವೇ.ಬ್ರ.ಶ್ರೀ ಕೆ. ಶೇಷಾದ್ರಿ ಅವರು ಖಾಸಗಿ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

English summary
After Visiting the Sri Kshetra Dharmasthala former CM Yeddyurappa busy in performing Somayagam at Kalladka in Batwala taluk, Dakshina Kananda with minister Shobha Karandlaje and MLC Bharti Shetty. Yeddyurappa said he is confident of becoming CM once again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X