ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಭವನ ನಿಮ್ಮದು, ನಾನು ಯಾತ್ರಿಕ: ಹಂಸರಾಜ್

By Super
|
Google Oneindia Kannada News

Governor Hansraj Bhardwaj PresentsT.S. Satyan Memorial Awards
ಬೆಂಗಳೂರು, ಡಿ 18: "ನಾನು ಪತ್ರಕರ್ತನೂ ಅಲ್ಲ, ಛಾಯಾ ಗ್ರಾಹಕನೂ ಅಲ್ಲ. ಆದರೆ ಪತ್ರಿಕೆಗಳಲ್ಲಿ ಬರುವ ಅತ್ಯುತ್ತಮವಾದದ್ದನ್ನು ಓದುವುದು ಮತ್ತು ಆನಂದಿಸುವುದು ನನಗೆ ಸದಾ ಖುಷಿ ತರುವ ವಿಚಾರ" ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಹೇಳಿದ್ದಾರೆ.

ಅವರು ರಾಜಭವನದಲ್ಲಿ ಟಿಎಸ್ ಸತ್ಯನ್ ಸ್ಮಾರಕ ಪ್ರಶಸ್ತಿಗಳನ್ನು ಭಾನುವಾರ ವಿತರಿಸಿ ಮಾತನಾಡುತ್ತಿದ್ದರು. "A Thing of Beauty is a Joy Forever" ಎಂದು ಜಾನ್ ಕೀಟ್ಸ್ ಮಾತನ್ನು ಉಲ್ಲೇಖಿಸಿ ಮಾತನಾಡಿದ ಹಂಸರಾಜ್ ಭಾರಧ್ವಾಜ್ "ಪತ್ರಿಕೆಗಳಲ್ಲಿ ಅತ್ಯುತ್ತಮವಾದದ್ದನ್ನು ಓದಲು ಯಾವತ್ತೂ ಸಂತೋಷ ಪಡುತ್ತೇನೆ" ಎಂದರು.

"ರಾಜ್ಯಪಾಲರು ಮಾಧ್ಯಮಗಳಿಗೆ ಮುಕ್ತವಾಗಿ ಮಾತನಾಡಬಾರದು ಎನ್ನುವುದರಲ್ಲಿ ನನಗೆ ನಂಬಿಕೆಯಿಲ್ಲ. ಈಗ ಕಾಲ ಬದಲಾಗಿದೆ, ಎಲ್ಲಾ ಸಾಮಾಜಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಆಶೆ ನನಗಿದೆ" ಎಂದರು. "ರಾಜ್ಯದ ರಾಜಭವನದ ಬಾಗಿಲು ಗೌರವಾನ್ವಿತ ಪ್ರಜೆಗಳಿಗೆ ಯಾವಾಗಲೂ ಮುಕ್ತವಾಗಿರುತ್ತವೆ" ಎಂದು ಹೇಳಿದ ಭಾರಧ್ವಾಜ್ "ನಾನು ಇಲ್ಲಿ ಶಾಶ್ವತವಾಗಿರುವುದಿಲ್ಲ, ಈ ರಾಜಭವನ ನಿಮ್ಮದು" ಎಂದರು.

ಪ್ರಶಸ್ತಿ ಪಡೆದವರ ಪ್ರೊಫೈಲ್ ನೋಡಿಬಿಡಿ

English summary
Karnataka Governor Hansraj Bhardwaj Presents T.S. Satyan Memorial Awards for Photojournalism. T.S. Satyan Memorial Awards instituted by Karnataka Photo News and Churumuri.com blog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X