ಉತ್ತಮ ಛಾಯಾಗ್ರಾಹಕರಿಗೆ ಟಿಎಸ್ ಸತ್ಯನ್ ಪ್ರಶಸ್ತಿ
ಖುದ್ದು ಖ್ಯಾತ ಛಾಯಾಪತ್ರಕರ್ತರಾಗಿದ್ದ ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ (ಟಿಎಸ್ ಸತ್ಯನ್) ಅವರ ಹೆಸರಲ್ಲಿ ನೀಡುತ್ತಿರುವ ಈ ಪ್ರಶಸ್ತಿಗಳನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬೆಳಿಗ್ಗೆ 11.15ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಿದ್ದಾರೆ.
ಜೀವಮಾನ ಸಾಧನೆ ಪ್ರಶಸ್ತಿ 10 ಸಾವಿರ ರು. ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಉಳಿದ ಪ್ರಶಸ್ತಿ ಪಡೆದವರಿಗೆ 5 ಸಾವಿರ ರು. ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತಿದೆ. ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ಟಿಜೆಎಸ್ ಜಾರ್ಜ್ ಮತ್ತು ಪ್ರಜಾವಾಣಿ ಸಂಪಾದಕ ಕೆಎನ್ ಶಾಂತ ಕುಮಾರ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಪ್ರಶಸ್ತಿ ಪಡೆದವರು
*
ಜೀವಮಾನ
ಸಾಧನೆ
ಪ್ರಶಸ್ತಿ
:
ಯಜ್ಞ,
ಮಂಗಳೂರು
*
ಅತ್ಯುತ್ತಮ
ದಿನಪತ್ರಿಕೆ
ಛಾಯಾಗ್ರಾಹಕ
:
ಕೆ.
ಗೋಪಿನಾಥನ್,
ದಿ
ಹಿಂದೂ,
ಬೆಂಗಳೂರು
*
ಅತ್ಯುತ್ತಮ
ವೃತ್ತಿಪರ
ಛಾಯಾಗ್ರಾಹಕ
:
ನೇತ್ರ
ರಾಜು,
ದಿ
ಟೈಮ್ಸ್
ಆಫ್
ಇಂಡಿಯಾ,
ಮೈಸೂರು
*
ಅತ್ಯುತ್ತಮ
ಮ್ಯಾಗಜೀನ್
ಛಾಯಾಗ್ರಾಹಕ
:
ಭಾನು
ಪ್ರಕಾಶ್
ಚಂದ್ರ,
ದಿ
ವೀಕ್,
ಬೆಂಗಳೂರು
*
ಅತ್ಯುತ್ತಮ
ಹವ್ಯಾಸಿ
ಛಾಯಾಗ್ರಾಹಕ
:
'ರಿಗ್ರೆಟ್'
ಅಯ್ಯರ್,
ಬೆಂಗಳೂರು
*
ಅತ್ಯುತ್ತಮ
ಆನ್ಲೈನ್
ಛಾಯಾಗ್ರಾಹಕ
:
ಎಮ್ಎಸ್
ಗೋಪಾಲ್,
eyeforindia.blogspot.com
ಸೂಚನೆ : ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ ವಿರುತ್ತದೆ. ಸಮಾರಂಭ ಶುರುವಾಗುವ ಮೊದಲೇ ಆಗಮಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ. ಸಮಾರಂಭ ರಾಜಭವನದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.