ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಣಿ ವರದಿ, ಸುಪ್ರೀಂಕೋರ್ಟ್ ಮೇಲೆ ಭಾರ ಹಾಕಿದ ಹೆಗ್ಡೆ
ಕರ್ನಾಟಕ ಜನ ಜಾಗೃತಿ ವೇದಿಕೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೆಗ್ಡೆ, ಅಕ್ರಮ ಗಣಿಗಾರಿಕೆ ಕುರಿತು ನೀಡಿರುವ ವರದಿಗೆ ಸುಪ್ರೀಂ ಕೋರ್ಟ್ನಲ್ಲಿ ಮನ್ನಣೆ ದೊರೆಯಲಿದೆ ಎಂಬ ವಿಶ್ವಾದವಿದೆ.
ನಮ್ಮ ತಂಡ ಅತ್ಯಂತ ಪರಿಶ್ರಮದಿಂದ ವರದಿ ತಯಾರಿಸಿದ್ದೇವೆ. ಆದರೆ, ಸರ್ಕಾರ ವರದಿಯನ್ನು ನಿಷ್ಕ್ರೀಯಗೊಳಿಸಿ, ವರದಿಯ ಸತ್ಯಾಸತ್ಯತೆ ಬಗ್ಗೆ ಚರ್ಚಿಸುತ್ತಿರುವುದು ವಿಷಾದದ ಸಂಗತಿ ಎಂದು ಸಂತೋಷ್ ಹೆಗ್ಡೆ ಹೇಳಿದರು.
ಗಣಿವರದಿಯಲ್ಲಿ ನಿಜಾಂಶಗಳನ್ನು ಹೊರಬಿದ್ದ ನಂತರ, ರಾಜಕಾರಣಿಗಳು ನನ್ನನ್ನು ಒಳಗೊಂಡಂತೆ ಲೋಕಾಯುಕ್ತ ಸಂಸ್ಥೆಯನ್ನೂ ದ್ವೇಷಿಸಲು ಪ್ರಾರಂಭಿಸಿದರು ಎಂದು ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ಇಚ್ಚಾಶಕ್ತಿ ಕೊರತೆ: ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿಗೆ ಕೇಂದ್ರ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸಂಸತ್ನಲ್ಲಿ ಮಸೂದೆ ಜಾರಿಗೆ ವಿರೋಧ ವ್ಯಕ್ತವಾಗುತ್ತಿರುವುದು ಸರಿಯಾದ ಕ್ರಮವಲ್ಲ. ಕೇಂದ್ರ ಸರಕಾರ ಈ ಕುರಿತು ಸಂಸತ್ನಲ್ಲಿ ಚರ್ಚಿಸದೇ ಜಾರಿಗೊಳಿಸುವಂತಾಗಬೇಕು ಎಂದರು.
Comments
ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ಜನ ಲೋಕಪಾಲ ಮಸೂದೆ ಬೆಂಗಳೂರು santosh hegde illegal mining jan lokpal bill bangalore
English summary
Justice Santosh Hegde said he believes that Supreme court will agree with Illegal mining report by Lokayukta and orders action against accused. Both Andhra Pradesh and Goa government taken action based on report but Karnataka never discussed about it.
Story first published: Tuesday, December 13, 2011, 13:02 [IST]