1 ಲಕ್ಷ ಕೋಟಿ ಐಟಿ ರಫ್ತು ನಿರೀಕ್ಷೆಯಲ್ಲಿ ಕರ್ನಾಟಕ
2010-11 ಆರ್ಥಿಕ ವರ್ಷದಲ್ಲಿ ಸುಮಾರು 85,000 ಐಟಿ ರಫ್ತು ಸಾಧಿಸಿದ ಕರ್ನಾಟಕ ಈ ಬಾರಿ ಶೇ.22ರಷ್ಟು ಏಳಿಗೆ ಕಂಡಿದ್ದು, 100,000 ಕೋಟಿ ರು ದಾಟುವ ನಿರೀಕ್ಷೆಯಿದೆ
ಐಟಿಐಆರ್ ಯೋಜನೆ: ರಾಜ್ಯದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಗತಿ ಏಳಿಗೆ ಕಂಡಿದೆ. 8 ಲಕ್ಷ ಮಂದಿ ನೇರವಾಗಿ ನೇಮಕಾತಿಯಾಗಿದ್ದಾರೆ. ವರ್ಷಾಂತ್ಯಕ್ಕೆ 9 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದರು.
ಮಾಹಿತಿ ತಂತ್ರಜ್ಞಾನ ಬಂಡವಾಳ ಪ್ರದೇಶ(ITIR) ನಿರ್ಮಾಣ ಹಾಗೂ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಈ ಹೊಸ ಐಟಿ ಸಿಟಿ ನಿರ್ಮಾಣವಾಗಲಿದೆ ಎಂದು ವಿದ್ಯಾಶಂಕರ್ ಹೇಳಿದರು.
ಸುಮಾರು 40 ಚ.ಕೀ ವಿಸ್ತೀರ್ಣದ ಈ ಐಟಿ ಸಿಟಿ ಎರಡು ಹಂತಗಳಲ್ಲಿ ರೂಪುಗೊಳ್ಳಲಿದೆ. ಮೊದಲ ಹಂತದಲ್ಲಿ 2,000 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗುವುದು. ಐಟಿಐಆರ್ ಯೋಜನೆಯಿಂದ ಸುಮಾರು 1 ಲಕ್ಷ ರೂ ಬಂಡವಾಳ ನಿರೀಕ್ಷಿಸಲಾಗಿದೆ. ಸುಮಾರು 3 ಮಿಲಿಯನ್ ಮಂದಿಗೆ ಉದ್ಯೋಗ ಸಿಗುವ ಭರವಸೆ ಇದೆ ಎಂದು ವಿದ್ಯಾಶಂಕರ್ ವಿವರಿಸಿದರು.
ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಕೇಂದ್ರ ಸರ್ಕಾರದಿಂದ ಇನ್ನೂ ಉತ್ತರ ಬಂದಿಲ್ಲ. ಕರ್ನಾಟಕ ಸರ್ಕಾರ ಸುಮಾರು 50 ಎಕರೆ ಭೂಮಿಯನ್ನು ಐಐಟಿಗಾಗಿ ಕಾಯ್ದಿರಿಸಿದೆ ಎಂದು ವಿದ್ಯಾಶಂಕರ್ ಹೇಳಿದರು.