ಕೋಲ್ಕತ್ತಾ ಆಸ್ಪತ್ರೆ ಬೆಂಕಿ ದುರಂತ, 89 ಮಂದಿ ಸಾವು
ನಿರ್ದೇಶಕರ ಬಂಧನ : ಈ ಘಟನೆಗೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿಗಳಾದ ಎಸ್ ಕೆ ಟೋಡಿ, ಆರ್ ಎಸ್ ಗೋಯೆಂಕಾ ಸೇರಿದಂತೆ 6 ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ನಾನಾ ಸೆಕ್ಷನ್ ಅಡಿಯಲ್ಲಿ ಅವರ ಮೇಲೆ ಕೇಸನ್ನು ಹಾಕಲಾಗಿದೆ.
ಮುಂಜಾನೆ 3.30ರ ಸುಮಾರಿಗೆ ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ನಿಧಾನವಾಗಿ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಈ ದುರಂತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃತ ದೇಹಗಳನ್ನು ಎಸ್ ಎಸ್ ಕೆಎಂ ಆಸ್ಪತೆಯಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಖಾತೆ ಸಚಿವ ಸುದೀಪ್ ಬಂಧೋಪಾಧ್ಯಾಯ್ ಹೇಳಿದ್ದಾರೆ.
ಸಹಾಯವಾಣಿ ಸಂಖ್ಯೆಗಳು: 98312 25067, 99322 15296, 98312 25067
ಸುಮಾರು 24ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಬೇಸ್ಮೆಂಟ್ ನಲ್ಲಿ ಆಮ್ಲಜನಕದ ಸಿಲೆಂಡರ್ ಗಳನ್ನು ಶೇಖರಿಸಿ ಇಡಲಾಗಿತ್ತು. ಹೀಗಾಗಿ ಬೆಂಕಿ ನಂದಿಸಲು ವಿಳಂಬವಾಗುತ್ತಿದೆ ಎಂದು ಅಗ್ನಿ ಶಾಮಕದಳದ ಸಿಬ್ಬಂದಿ ಹೇಳಿದ್ದಾರೆ.
ಅಗ್ನಿಶಾಮಕದಳ ಹಾಗೂ ವಿಪತ್ತು ನಿರ್ವಹಣಾ ದಳದವರು ಆಸ್ಪತ್ರೆ ಕಿಟಕಿಗಳ ಮೂಲಕ ಒಳ ಪ್ರವೇಶಿಸಿ, ಐಸಿಯು, ಐಸಿಸಿಯು, ಐಟಿಯು ಮುಂತಾದ ತುರ್ತು ನಿಗಾ ಘಟಕದಲ್ಲಿರುವ ರೋಗಿಗಳನ್ನು ಉಳಿಸಿ, ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.