ಕಡೆಗೂ ಸರಕಾರದ ನೋಟೀಸಿಗೆ ಉತ್ತರಿಸಿದ ಮಂದಾ
ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಅಗತ್ಯವಿಲ್ಲ. ಕನ್ನಡ ನಾಡು ಮತ್ತು ನುಡಿಗೆ ಅಗೌರವ ತೋರಿಲ್ಲ. ಕಾನೂನುಬದ್ಧವಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ. ಪೂರ್ಣಾವಧಿಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಿ ಎಂದು ಕೋರಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಾಲ್ಕು ಪುಟಗಳ ಪತ್ರವನ್ನು ಬಾಳೆಕುಂದ್ರಿ ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯವರಾದ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದಾಯವಾದಾಗ ಅವರಿಗೆ ಸನ್ಮಾನ ಮಾಡಬೇಕೆಂಬ ಪ್ರಸ್ತಾವನೆಯನ್ನು ತಿರಸ್ಕರಿಸಿ ಕನ್ನಡದ ಹೆಮ್ಮೆಯ ಸಾಹಿತಿಗೆ ಅಧಿಕಾರದಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಅವಮಾನ ಮಾಡಿತ್ತು.
ಸರಕಾರ ನೀಡಿದ ನೋಟೀಸಿಗೆ ಉತ್ತರಿಸದೆ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು. ನಂತರ ಎಲ್ಲ ಸದಸ್ಯರೂ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದರು. ಮೇಯರ್ ಮಂದಾ ಮತ್ತು ಉಪಮೇಯರ್ ರೇಣು ಕಿಲ್ಲೇಕರ್ ಅವರಂಥ ನಾಡದ್ರೋಹಿಗಳನ್ನು ಬಂಧಿಸಿ, ನಗರಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಕನ್ನಡ ಸಂಘಟನೆಗಳಿಂದ ಸರಕಾರದ ಮೇಲೆ ಒತ್ತಡ ಬಂದಿತ್ತು.