ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಯ್ಯ ಶೆಟ್ಟಿಗೆ ನಿರೀಕ್ಷಣಾ ಜಾಮೀನು ಮಂಜೂರು
ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರ ವಿರುದ್ಧ ಸಿರಾಜಿನ್ ಬಾಷಾ ಸಲ್ಲಿಸಿದ್ದ 2ನೇ ದೂರಿನ ಅರ್ಜಿ ತಿರಸ್ಕಾರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ(ಡಿ.8)ವಿಚಾರಣೆ ನಡೆಸಿದ ನ್ಯಾ.ಎಚ್ ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠ, ಕೃಷ್ಣಯ್ಯ ಶೆಟ್ಟಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
2 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷಿಗಳನ್ನು ನಾಶಪಡಿಸುವಂತಿಲ್ಲ. ಕೋರ್ಟ್ ಅನುಮತಿ ಇಲ್ಲದೆ ವಿದೇಶಕ್ಕೆ ಹಾರುವಂತಿಲ್ಲ ಎಂದು ಹೈಕೋರ್ಟ್ ಪೀಠ ಸೂಚಿಸಿದೆ.
ಕೃಷ್ಣಯ್ಯ ಶೆಟ್ಟಿ ಅವರು ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದು, ಶುಕ್ರವಾರ ಮತ್ತೆ ಜೈಲಿಗೆ ಹೋಗಲಿದ್ದಾರೆ. ಆದರೆ ಈ ಬಾರಿ ಅಲ್ಲಿ ಕೈದಿಗಳಿಗೆ ಹಾಸಿಗೆ ಹೊದಿಕೆ ಮತ್ತು ಸೀರೆ ವಿತರಿಸಿದ್ದರು. ರಾಜಕೀಯ ಮುಖಂಡರಿಗೆ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ರವಾನೆಯಾಗಿತ್ತು. ಈಗ ಯಾರಿಗೆ ಯಾವ ಪ್ರಸಾದ ಸಿಗಲಿದೆ ಕಾದು ನೋಡಬೇಕಿದೆ.
Comments
ಕೃಷ್ಣಯ್ಯ ಶೆಟ್ಟಿ ಜಾಮೀನು ಹೈಕೋರ್ಟ್ ಸಿರಾಜಿನ್ ಬಾಷಾ ಭೂ ಹಗರಣ ಬೆಂಗಳೂರು krishnaiah shetty high court sirajin basha land scam bangalore
English summary
Karnataka high Court judge HC Beliyappa today(Dec.8) rejected Sirajin Basha's 2nd plea and granted anticipatory bail to Malur Krishnaiah Shetty. Former CM Yeddyurappa and Krishnaiah Shetty co accused in land denotification case.
Story first published: Thursday, December 8, 2011, 16:43 [IST]