ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂತೂ ಕರುಣಾಕರ ರೆಡ್ಡಿ ಅಜ್ಞಾತವಾಸ ಅಂತ್ಯ
ರೆಡ್ಡಿ ಸೋದರರ ರಾಜಕೀಯ ಬಂಟ ಶ್ರೀರಾಮುಲು ಅವರು ಈ ವಿಷಯ ತಿಳಿಸಿದ್ದಾರೆ. ಅಣ್ಣಾ ಕರುಣಾಕರ ರೆಡ್ಡಿ ಅವರು ಈ ಎರಡು-ಮೂರು ತಿಂಗಳಲ್ಲಿ ಎರಡು ಬಾರಿ ಹೊರ ದೇಶಗಳಿಗೆ ಹೋಗಿದ್ದರು. ಅದು ಬಿಟ್ಟರೆ ಅನಂತಪುರದಲ್ಲಿ ಪೂಜೆಯಲ್ಲಿ ತೊಡಗಿದ್ದರು ಎಂದು ರಾಮುಲು ಹೇಳಿದ್ದಾರೆ. ಇದನ್ನು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಸಹ ಪುಷ್ಠೀಕರಿಸಿದ್ದು, ಹಿರಿಯಣ್ಣ ಜನಾರ್ದನ ರೆಡ್ಡಿಗೆ ಕಷ್ಟದ ದಿನಗಳು ಎದುರಾಗಿದ್ದರಿಂದ ಕರುಣಾಕರ ರೆಡ್ಡಿ ದೇವರ ಮೊರೆ ಹೋಗಿದ್ದರು ಎಂದಿದ್ದಾರೆ.
ಈ ಮಧ್ಯೆ, ಮಾಜಿ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರ ಅಜ್ಞಾತವಾಸ ಸದ್ಯದಲ್ಲೇ ಅಂತ್ಯ ಕಾಣಲಿದ್ದು, ಡಿ. 7 ಮತ್ತು 8ರಂದು ಹರಪನಹಳ್ಳಿಯಲ್ಲಿ ಅವರು ಕ್ಷೇತ್ರ ಸಂಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಖಲಾರ್ಹ ಸಂಗತಿಯೆಂದರೆ ಅ. 8ರಂದು ಇಲ್ಲಿ ನಡೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಕರುಣಾಕರ ರೆಡ್ಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
English summary
According to sources the Former Karnataka Revenue Minister G. Karunakara Reddy will appear in public in Davangere constituency after a gap around 3 months.
Story first published: Wednesday, December 7, 2011, 12:20 [IST]