ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಣಿ ಅಕ್ರಮ : ರೆಡ್ಡಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್
ಜನಾರ್ದನ ರೆಡ್ಡಿ ಹೊರತುಪಡಿಸಿ, ಅವರ ಸಂಬಂಧಿ ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿ, ಆಂಧ್ರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಮತ್ತು ಓಬಳಾಪುರಂ ಕಂಪನಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ಜಂಟಿ ನಿರ್ದೇಶಕ (ಹೈದರಾಬಾದ್) ವಿ.ವಿ. ಲಕ್ಷ್ಮಿ ನಾರಾಯಣ ಅವರು ತಿಳಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿಯವರನ್ನು ಬಳ್ಳಾರಿಯಲ್ಲಿ ಸೆಪ್ಟೆಂಬರ್ 5ರಂದು ಬಂಧಿಸಲಾಗಿತ್ತು. ನಂತರ ರಾಜಗೋಪಾಲ್ ಅವರನ್ನೂ ಸಿಬಿಐ ಬಂಧಿಸಿತ್ತು. ಮೂವರೂ ಈಗ ಚಂಚಲಗುಡ ಜೈಲಿನಲ್ಲಿ ಕೈದಿಗಗಳಾಗಿದ್ದಾರೆ.
ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಸಂಚು), 409 (ಸಾರ್ವಜನಿಕ ನಂಬಿಕೆ ದ್ರೋಹ), 420 (ಮೋಸ), 468 (ಮೋಸ ಮಾಡಲು ನಕಲಿ ಸಹಿ) ಮತ್ತು 471 ಸೆಕ್ಷನ್ (ನಕಲಿ ದಾಖಲೆಯನ್ನು ಬಳಸಿದ್ದು) ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
Comments
ಅಕ್ರಮ ಗಣಿಗಾರಿಕೆ ಜನಾರ್ದನ ರೆಡ್ಡಿ ಶ್ರೀನಿವಾಸ ರೆಡ್ಡಿ ಓಎಂಸಿ ಸಿಬಿಐ illegal mining janardhana reddy srinivas reddy omc cbi
English summary
Central Bureau of Investigation (Hyderabad zone) filed charge sheet against Obalapuram Mining Company, Janardhana Reddy, BV Srinivas Reddy and VD Rajagopal on Saturday before special court. All the three have been lodged in Chanchalguda central jail in Hyderabad.
Story first published: Saturday, December 3, 2011, 13:40 [IST]