ಬಿಬಿಎಂಪಿಗೆ ಬೆಂಕಿ, ನೋ ಸಿಓಡಿ, ಸಿಬಿಐ ತನಿಖೆ:ಮೇಯರ್
ಸಾವಿರಾರು ಕೋಟಿ ಹಗರಣದ ಮಹತ್ವದ ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿವೆ ಎಂಬ ವರದಿ ನೋಡಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಕಳವಳಗೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಮೇಯರ್ ಶಾರದಮ್ಮ ಹೇಳಿದರು.
ಅ.28ರಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರಿಗೆ 'ಪೌರ ಸನ್ಮಾನ' ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರೊಡನೆ ಹೆಚ್ಚಿನ ಚರ್ಚೆ ನಡೆಸಲಾಗಿದೆ. ಬಿಬಿಎಂಪಿ ಕಟ್ಟಡದ ಬೆಂಕಿ ಆಕಸ್ಮಿಕ ಬಗ್ಗೆ ಗೃಹ ಇಲಾಖೆ ನಿರ್ದೇಶನದಂತೆ ಮಾಹಿತಿ ಒದಗಿಸುತ್ತಿದ್ದೇವೆ ಎಂದು ಶಾರದಮ್ಮ ಹೇಳಿದರು.
ಓವರ್ ಟು ಗೃಹ ಸಚಿವ ಅಶೋಕ್: ಬಸವನಗುಡಿಯಲ್ಲಿ ಬಸವಣ್ಣನಿಗೆ ಕಡ್ಲೇಕಾಯಿ ತುಲಾಭಾರ ಸೇವೆ ಸಲ್ಲಿಸಿ ಐತಿಹಾಸಿಕ ಪರಿಷೆಗೆ ಚಾಲನೆ ಕೊಟ್ಟು ಹೊರ ಬಂದ ಅಶೋಕ್ ಅವರು ಬಿಬಿಎಂಪಿ ಬೆಂಕಿ ಪ್ರಕರಣದ ಬಗ್ಗೆ ತಣ್ಣಗೆ ಉತ್ತರಿಸಿದರು.
ಬಿಬಿಎಂಪಿ ಕಟ್ಟಡದ ಮೂರನೇ ಮಹಡಿಯಲ್ಲಿ ಮಹತ್ವದ ದಾಖಲೆಗಳಿರಲಿಲ್ಲ. ಪೊಲೀಸ್ ಇಲಾಖೆ ಕಡತಗಳಿತ್ತು ಎಂದು ಪ್ರಾಥಮಕ ವರದಿಯಿಂದ ತಿಳಿದುಬಂದಿದೆ.
ಎಲ್ಲೆಡೆ ಸಿಸಿಟಿವಿ ಅಳವಡಿಸಿರುವುದರಿಂದ ಈ ದುಷ್ಕೃತ್ಯ ಎಸೆಗಿದವರನ್ನು ಸುಲಭವಾಗಿ ಕಂಡು ಹಿಡಿಯಬಹುದು ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಸಿಒಡಿ ಅಥವಾ ಸಿಬಿಐ ತನಿಖೆ ಅಗತ್ಯವಲ್ಲ. ಈ ಕೃತ್ಯ ಎಸೆಗಿದವರು ಯಾರೇ ಆಗಲಿ ಶಿಕ್ಷಿಸಲಾಗುವುದು ಎಂದು ಅಶೋಕ್ ಸ್ಪಷ್ಟಪಡಿಸಿದರು.