ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಸಕ ಮುನಿರಾಜು ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ
ಲೋಕಾಯುಕ್ತ ಪೊಲೀಸರ ತನಿಖೆ ಪ್ರಶ್ನಿಸಿ ಶಾಸಕ ಮುನಿರಾಜು ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಬಿವಿ ಪಿಂಟೋ ಮೇಲ್ಕಂಡ ಆದೇಶ ನೀಡಿದ್ದಾರೆ. ನ.24ರ ವರೆಗೆ ಲೋಕಾಯುಕ್ತ ಪೊಲೀಸರು ಯಾವುದೇ ತನಿಖೆ ಕೈಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 156(3)ನೇ ಕಲಂ ಅಡಿಯಲ್ಲಿ ಎಸ್. ಮುನಿರಾಜು ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಪ್ರಕರಣದ ಬಗ್ಗೆ ಪೊಲೀಸರು ತನಿಖಾ ವರದಿಯನ್ನು ಈಗಾಗಲೇ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ.
ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬವರು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ ಶಾಸಕ ಮುನಿರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚನೆ ನೀಡಿತ್ತು. ಶಾಸಕ ಮುನಿರಾಜುಗೆ ಉರುಳಾದ ಭೂಮಿ ಕಥೆ ಇಲ್ಲಿದೆ ಓದಿ
Comments
ಭೂ ಹಗರಣ ಲೋಕಾಯುಕ್ತ ಮುನಿರಾಜು ಬಂಧನ ಯಶವಂತಪುರ ಬೆಂಗಳೂರು muniraju arrest lokayukta land scam yeshwanthpur bangalore
English summary
High court today passed stay order in Lokayukta police investigation on Dasararalli BJP MLA S Muniraju. Lokayukta DYSP have already filed FIR against him. Lokayukta was probe in to land encroachment allegation case against Muniraju in Dasarahalli Yeshwanthpur hobli Banaglore.
Story first published: Monday, November 21, 2011, 13:27 [IST]