ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಗದ ಕೋಳಿಗಳಂತೆ ಕಿತ್ತಾಡಿದ ಕಾರಜೋಳ ನಿರಾಣಿ

By Prasad
|
Google Oneindia Kannada News

Murugesh Nirani and Govind Karjol
ಬೆಂಗಳೂರು, ನ. 17 : ಬುಧವಾರ ಮಧ್ಯಾಹ್ನ ನಡೆದ ಬಿಜೆಪಿ ಸಚಿವರ ಸಂಪುಟ ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಕಾಳಗದ ಕೋಳಿಗಳಂತೆ ಕಿತ್ತಾಡಿಕೊಂಡಿದ್ದಾರೆ.

ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಾರೀ ವಾಗ್ಯುದ್ಧ ನಡೆದಿದೆ. ಜೊತೆಗೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹಿಂಬಾಲಕರು ಕೂಡ ಗೈರಾಗಿದ್ದು ಇಬ್ಬರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು.

ಇದು ವಿಪರೀತಕ್ಕೆ ಹೋಗುವುದನ್ನು ತಪ್ಪಿಸಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಇಬ್ಬರನ್ನೂ ಸಮಾಧಾನಪಡಿಸಿದರು. ಬಳ್ಳಾರಿ ಉಪ ಚುನಾವಣೆ ಕೂಡ ಬಿಜೆಪಿಗೆ ಸಾಕಷ್ಟು ತಲೆಬಿಸಿ ತಂದಿದೆ. ಸಿಡಿದೆದ್ದ ಬಳ್ಳಾರಿ ಸಹೋದರ ಶ್ರೀರಾಮುಲುವನ್ನು ಹೇಗೆ ಮಟ್ಟಹಾಕಬೇಕು ಎಂಬುದನ್ನು ಚರ್ಚಿಸಲು ಇಂದು ಸಂಜೆ ಬಿಜೆಪಿಯ ಕಾರ್ಯಕಾರಿಣಿ ಸಭೆ ಸೇರುತ್ತಿದೆ.

English summary
Kannada and Culture minister Govind Karjol and Industry minister Murugesh Nirani resorted to fight in BJP cabinet meeting to discuss about support price to sugarcane. Supporters of BSY abstained from the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X