ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು
ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿವಿ ಪಿಂಟೋ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ತೀರ್ಪನ್ನು ಬುಧವಾರ(ನ.16)ಕ್ಕೆ ಕಾಯ್ದಿರಿಸಿತ್ತು.
ಬಾಷಾ ಸಲ್ಲಿಸಿದ್ದ 1,4 ಹಾಗೂ 5 ನೇ ದೂರಿಗೆ ಸಂಬಂಧಿಸಿದಂತೆ ಮಂಗಳವಾರ ಬಹುತೇಕ ವಿಚಾರಣೆ ಮುಗಿದಿತ್ತು. ಆದರೆ, ಕೋರ್ಟ್ ಸಮಯ ಮುಗಿದಿದ್ದರಿಂದ ಬುಧವಾರ ತೀರ್ಪು ಪ್ರಕಟಿಸುವುದಾಗಿ ನ್ಯಾ. ಪಿಂಟೋ ಪ್ರಕಟಿಸಿದ್ದರು.
3 ಹಾಗೂ 4 ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಪ್ರಸ್ತುತ ನಿರೀಕ್ಷಣಾ ಜಾಮೀನಿನ ಬಗ್ಗೆ ಸಿರಾಜಿನ್ ಬಾಷಾ ವಕೀಲರು ಆಕ್ಷೇಪಣೆ ಸಲ್ಲಿಸದ ಕಾರಣ, ಯಡಿಯೂರಪ್ಪ ಅವರಿಗೆ ಜಾಮೀನು ಸುಲಭವಾಗಿ ಮಂಜೂರಾಗಿದೆ.
ಆದರೆ, ಸಾಕ್ಷ್ಯ ನಾಶಪಡಿಸದಂತೆ ಯಡಿಯೂರಪ್ಪ ಅವರಿಗೆ ನ್ಯಾ. ಪಿಂಟೋ ಎಚ್ಚರಿಸಿದ್ದಾರೆ. 2 ಲಕ್ಷ ರೂ ಮೊತ್ತದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ವಿದೇಶಕ್ಕೆ ಹಾರುವಂತಿಲ್ಲ. ಪ್ರತಿ ವಿಚಾರಣೆ ವೇಳೆ ಕೋರ್ಟ್ ಗೆ ಹಾಜರಾಗಬೇಕು ಎಂದು ನ್ಯಾ. ಪಿಂಟೋ ಸೂಚಿಸಿದ್ದಾರೆ.
Comments
ಯಡಿಯೂರಪ್ಪ ಜಾಮೀನು ಪರಪ್ಪನ ಅಗ್ರಹಾರ ಜೈಲು ಹೈಕೋರ್ಟ್ ಸಿರಾಜಿನ್ ಬಾಷಾ yediyurappa parappana agrahara high court jail sirajin basha
English summary
Karnataka high court Justice Pinto has granted anticipatory bail to former CM BS Yeddyurappa today(Nov.16). Earlier Justice Pinto passed the order on Sirajin Pasha's 1,4 and 5th complaint related to denotification case.
Story first published: Wednesday, November 16, 2011, 12:56 [IST]