ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಜಾಮೀನು ಅರ್ಜಿ, ಬುಧವಾರ ( ನ 16) ತೀರ್ಪು

By Mahesh
|
Google Oneindia Kannada News

BS Yeddyurappa
ಬೆಂಗಳೂರು, ನ.15: ಡಿನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಖಾಸಗಿ ದೂರಿನ ಪ್ರಮುಖ ಆರೋಪಿ ಬಿಎಸ್ ಯಡಿಯೂರಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹಾಗೂ ತೀರ್ಪನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಬುಧವಾರ(ನ.16)ಕ್ಕೆ ಮುಂದೂಡಿದೆ.

3 ಹಾಗೂ 4 ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿರುದ್ಧ ಸಿರಾಜಿನ್ ಬಾಷಾ ಪರ ವಕೀಲರು ಆಕ್ಷೇಪಣೆಗಳನ್ನು ಸಲ್ಲಿಸದ ಕಾರಣ ವಿಚಾರಣೆಯನ್ನು ಮುಂದುವರೆಸುವಂತೆ ನ್ಯಾಯಮೂರ್ತಿ ಬಿವಿ ಪಿಂಟೋ ಅವರು ಸೂಚಿಸಿದ್ದಾರೆ.

ಬಾಷಾ ಸಲ್ಲಿಸಿದ್ದ 1,4 ಹಾಗೂ 5 ನೇ ದೂರಿಗೆ ಸಂಬಂಧಿಸಿದಂತೆ ಮಂಗಳವಾರ ಬಹುತೇಕ ವಿಚಾರಣೆ ಮುಗಿದಿದ್ದು, ಆದೇಶ ನೀಡಲು ಕೋರ್ಟ್ ಸಮಯ ಸಾಲದಿದ್ದರಿಂದ ಬುಧವಾರಕ್ಕೆ ಮುಂದೂಡಲಾಗಿದೆ.

ರಾಜ್ಯ ಪ್ರವಾಸದಲ್ಲಿರುವ ಯಡಿಯೂರಪ್ಪ ಅವರು ಕೋರ್ಟ್ ಕಲಾಪದ ಸವಿವರಗಳನ್ನು ಕೇಳಿ ತಿಳಿದು ಕೊಂಡಿದ್ದು, ಬುಧವಾರ ದಿನ ಶುದ್ಧಿಯ ಬಗ್ಗೆ ತಮ್ಮ ಜ್ಯೋತಿಷಿಗಳಲ್ಲಿ ವಿಚಾರಿಸಿದ್ದಾರೆ ಎನ್ನಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡರೆ ಯಡಿಯೂರಪ್ಪ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಬೇಕಾಗುತ್ತದೆ.

English summary
Karnataka high court Justice Pinto has reserved order on anticipatory bail plea by former CM BS Yeddyurappa to Nov.16. Justice Pinto adjourned hearing and order on Sirajin Pasha's 1,4 and 5th complaint related to denotification case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X