ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀರಾಮನಿಗೇ ನಮ್ಮ ಅಖಂಡ ನಿಷ್ಠೆ: ಪಕ್ಷೇತರ ಶಾಸಕ ಗೂಳಿಹಟ್ಟಿ
ಬುಧವಾರ ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೂಳಿಹಟ್ಟಿ, ಶ್ರೀರಾಮುಲು ಮತ್ತು ಜನಾರ್ದನರೆಡ್ಡಿ ಅವರ ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಪರಿಶಿಷ್ಟ ಮುಖಂಡರನ್ನು ಒಂದಲ್ಲೊಂದು ರೀತಿಯಲ್ಲಿ ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಗುಡುಗಿದರು.
ಆದರೆ ಪಕ್ಷವು ರೆಡ್ಡಿ ಸೋದರರನ್ನೇ ಕಡೆಗಣಿಸಿದ್ದು ಸರಿಯಲ್ಲ. ಬಿಜೆಪಿ ಸರ್ಕಾರ ಇದಕ್ಕೆ ತಕ್ಕ ಪ್ರತಿಪಲ ಅನುಭವಿಸಲಿದೆ ಎಂದು ಎಚ್ಚರಿಕೆ ನೀಡಿದ ಗೂಳಿಹಟ್ಟಿ ಶೇಖರ್, ಈ ಉಪಚುನಾವಣೆ ಮೂಲಕ ಕೆಳ ವರ್ಗದವರಿಗೆ ನ್ಯಾಯ ದೊರಕಲಿದೆ ಎಂಬ ವಿಶ್ವಾಸ ತಮಗಿದೆ ಎಂದರು.
Comments
ಶ್ರೀರಾಮುಲು ಉಪ ಚುನಾವಣೆ ಬಳ್ಳಾರಿ ಬಿಜೆಪಿ ಜಿಲ್ಲಾಸುದ್ದಿ ಜೆಡಿಎಸ್ ಕಾಂಗ್ರೆಸ್ goolihatti shekhar sreeramulu bjp congress district news ಜನಾರ್ದನ ರೆಡ್ಡಿ
English summary
Bellary rural constituency Election: Independent MLAs support Rebel Sreeramulu declared ex Minister Goolihatti Shekhar in Bellary on Nov 9.
Story first published: Thursday, November 10, 2011, 12:31 [IST]