ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ, ಕಪ್ಪುಹಣದ ಬಗ್ಗೆ ಸೋನಿಯಾ ಮೌನ: ಅಡ್ವಾಣಿಗೆ ಅರಳುಮರುಳು

By Srinath
|
Google Oneindia Kannada News

advani-suffering-from-amnesia-digvijay-singh
ನವದೆಹಲಿ‌, ನ. 7: ಭ್ರಷ್ಟಾಚಾರ, ಕಪ್ಪುಹಣ, ಹಣದುಬ್ಬರಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೌನ ವಹಿಸಿದ್ದಾರೆ ಎಂದು ಟೀಕಿಸಿರುವ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ವಯೋಸಹಜ ಅರಳುಮರುಳು ಕಾಡುತ್ತಿರಬಹುದು ಎಂದು ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಎಐಸಿಸಿಯಲ್ಲಿ ಮಾತನಾಡಿದ್ದ ವೇಳೆ ಸೋನಿಯಾ ಭ್ರಷ್ಟಾಚಾರ ಮತ್ತು ಲೋಕಪಾಲ ಮಸೂದೆ ಕುರಿತು ಪ್ರಸ್ತಾಪಿಸಿದ್ದರು. ಅಡ್ವಾಣಿ ಇದನ್ನು ಮರೆತುಬಿಟ್ಟಿದ್ದಾರೆ. ವಯಸ್ಸಿನ ಭಾರದಿಂದಾಗಿ ಅಡ್ವಾಣಿ ಅವರಿಗೆ ಮರೆಗುಳಿತನ ಆವರಿಸಿರಬಹುದು ಎಂದು ಟ್ವಿಟ್ಟರ್ ನಲ್ಲಿ ಗೇಲಿ ಮಾಡಿದ್ದಾರೆ.

ತಾವು ನಡೆಸುತ್ತಿರುವ ಜನಚೇತನ ಯಾತ್ರೆ ಮುಂಬೈಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಅಡ್ವಾಣಿ, ಕಪ್ಪುಹಣ-ಭ್ರಷ್ಟಾಚಾರ-ಹಣದುಬ್ಬರಗಳ ಕುರಿತು ಮಾತನಾಡುವಂತೆ ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದ್ದರು.

English summary
On his way to Jan Chetna Yatra the BJP leader L.K. Advani on Saturday questioned United Progressive Alliance (UPA) chairperson Sonia Gandhi's silence on corruption, Congress leader Digvijay Singh hit back, asking if Advani suffered from ‘amnesia’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X