ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನ ಭೀತಿಯಲ್ಲಿ ಶಾಸಕ ಎಸ್ ಮುನಿರಾಜು

By Mahesh
|
Google Oneindia Kannada News

MLA S Muniraju
ಬೆಂಗಳೂರು, ನ.2: ಭೂ ಹಗರಣದ ಸುಳಿಯಲ್ಲಿ ಸಿಲುಕಿರುವ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರ ಬಂಧನ ಸಾಧ್ಯತೆಯಿದೆ. ಯಶವಂತ ಪುರ ಹೋಬಳಿಯಲ್ಲಿ ಶಾಸಕ ಮುನಿರಾಜು ಅಕ್ರಮದ ವಿಚಾರಣೆ ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಪುಟ್ಟಸ್ವಾಮಿ ಎಂಬುವರು ನೀಡಿದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ ಪಿಗೆ ನಿರ್ದೇಶನ ನೀಡಿದರು.

ಪ್ರಕರಣದ ವಿಚಾರಣೆಗಾಗಿ ಶಾಸಕ ಮುನಿರಾಜು ಅವರನ್ನು ಪೊಲೀಸರು ಬಂಧಿಸಬಹುದಾಗಿದೆ. ತನಿಖಾ ವರದಿ ನ,19ರೊಳಗೆ ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಬೇಕಿದೆ.

ಇಂಧನ ಸಚಿವೆ ಶೋಭ ಕರಂದ್ಲಾಜೆ ಅವರ ಕ್ಷೇತ್ರವಾದ ಯಶವಂತಪುರ ಹೋಬಳಿಯ ಕೆರೆ ಗುಡ್ಡದಹಳ್ಳಿಯಲ್ಲಿ 1 ಎಕರೆ 15 ಗುಂಟೆ ಜಮೀನನ್ನು ಶಾಸಕ ಮುನಿರಾಜು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಸಕ ಮುನಿರಾಜು ಜಮೀನ ನುಂಗಿದ ಕಥೆ ಓದಿ...

English summary
Dasararalli BJP MLA S Muniraju fears detention as Lokayukta special judge NK Sudhindra Rao ordered LOkayukta DYSP to probe in to land encroachment allegation case against Muniraju in Yeshwanthpur hobli Banaglore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X