ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಚ್ಚಿಬೀಳಿಸುವ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು
ಈಗಾಗಲೆ ಸಾಕಷ್ಟು ಉಬ್ಬರವಿಳಿತಗಳನ್ನು ಕಾಣುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗಳಾಗಲಿವೆ, ಅನೇಕ ಬದಲಾವಣೆಗಳಾಗಲಿವೆ ಎಂದು ಹೇಳಿ ಶ್ರೀಗಳು ರಾಜ್ಯ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.
ಕೆಲವೇ ತಿಂಗಳಲ್ಲಿ ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಭಾರೀ ನಷ್ಟ ಸಂಭವಿಸಲಿದೆ. ನಕ್ಸಲೀಯರ ಹಾವಳಿಯೂ ರಾಜ್ಯದಲ್ಲಿ ಹೆಚ್ಚಾಗಲಿದೆ. ಇಷ್ಟು ಮಾತ್ರವಲ್ಲ ಕರ್ನಾಟಕದಲ್ಲಿ ಉಗ್ರರಿಂದ ದಾಳಿಯಾಗುವ ಸಂಭವನೀಯತೆ ಇದೆ ಮುನ್ನೆಚ್ಚರಿಕೆ ನೀಡಿದ್ದಾರೆ. ಸರಕಾರ ಈಗಲೆ ಎಚ್ಚೆತ್ತುಕೊಳ್ಳುವುದು ಕ್ಷೇಮ.
ಇವೆಲ್ಲ ನಿರೀಕ್ಷಿಸಬಹುದಾದ ಭವಿಷ್ಯಗಳಾದರೆ, ನಿರೀಕ್ಷಿಸದೆ ಇರುವ ಭವಿಷ್ಯವನ್ನೂ ಹೇಳಿದ್ದಾರೆ. ಅದೇನೆಂದರೆ, ಶೋಕೇಸಿನಲ್ಲಿ ಕೂತಿದ್ದ ಮುತ್ತಿನ ಗಿಳಿಯೂ ಮಾತನಾಡಲಿದೆ. ಇದು ಶುಭದ ಸಂಕೇತವಲ್ಲ ಎಂದು ಹೇಳಿ ಕೋಡಿಮಠ ಶ್ರೀಗಳು ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದಾರೆ.
Comments
ಭವಿಷ್ಯ ಕೋಡಿಮಠ ಶಿವಕುಮಾರ ಸ್ವಾಮೀಜಿ ಚನ್ನರಾಯಪಟ್ಟಣ ಜಿಲ್ಲಾಸುದ್ದಿ astrology prediction kodimutt seer swamiji
English summary
Seer of Kodimatha Sri Shivananda Shivayogi Rajendra Swamiji, famous for predictions, has said that Karnataka will see sea of changes in coming days in political, social area. He has warned that there will be attack by terrorists, state will see natures' fury, political turmoils will be there.
Story first published: Thursday, November 3, 2011, 10:05 [IST]