ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚಿಬೀಳಿಸುವ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

By Prasad
|
Google Oneindia Kannada News

Prediction by Kodimatha Swamiji
ಚನ್ನರಾಯಪಟ್ಟಣ, ನ. 2 : ಭವಿಷ್ಯ ಹೇಳುವುದರಲ್ಲಿ ನಿಸ್ಸೀಮರಾಗಿರುವ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯದ ರಾಜಕೀಯ, ಭದ್ರತೆ, ಸಮಾಜಿಕ ಏರಿಳಿತಗಳ ಬಗ್ಗೆ ಬಾಗೂರುನಲ್ಲಿ ಮತ್ತೆ ಭವಿಷ್ಯ ನುಡಿದಿದ್ದಾರೆ.

ಈಗಾಗಲೆ ಸಾಕಷ್ಟು ಉಬ್ಬರವಿಳಿತಗಳನ್ನು ಕಾಣುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗಳಾಗಲಿವೆ, ಅನೇಕ ಬದಲಾವಣೆಗಳಾಗಲಿವೆ ಎಂದು ಹೇಳಿ ಶ್ರೀಗಳು ರಾಜ್ಯ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ.

ಕೆಲವೇ ತಿಂಗಳಲ್ಲಿ ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಭಾರೀ ನಷ್ಟ ಸಂಭವಿಸಲಿದೆ. ನಕ್ಸಲೀಯರ ಹಾವಳಿಯೂ ರಾಜ್ಯದಲ್ಲಿ ಹೆಚ್ಚಾಗಲಿದೆ. ಇಷ್ಟು ಮಾತ್ರವಲ್ಲ ಕರ್ನಾಟಕದಲ್ಲಿ ಉಗ್ರರಿಂದ ದಾಳಿಯಾಗುವ ಸಂಭವನೀಯತೆ ಇದೆ ಮುನ್ನೆಚ್ಚರಿಕೆ ನೀಡಿದ್ದಾರೆ. ಸರಕಾರ ಈಗಲೆ ಎಚ್ಚೆತ್ತುಕೊಳ್ಳುವುದು ಕ್ಷೇಮ.

ಇವೆಲ್ಲ ನಿರೀಕ್ಷಿಸಬಹುದಾದ ಭವಿಷ್ಯಗಳಾದರೆ, ನಿರೀಕ್ಷಿಸದೆ ಇರುವ ಭವಿಷ್ಯವನ್ನೂ ಹೇಳಿದ್ದಾರೆ. ಅದೇನೆಂದರೆ, ಶೋಕೇಸಿನಲ್ಲಿ ಕೂತಿದ್ದ ಮುತ್ತಿನ ಗಿಳಿಯೂ ಮಾತನಾಡಲಿದೆ. ಇದು ಶುಭದ ಸಂಕೇತವಲ್ಲ ಎಂದು ಹೇಳಿ ಕೋಡಿಮಠ ಶ್ರೀಗಳು ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದಾರೆ.

English summary
Seer of Kodimatha Sri Shivananda Shivayogi Rajendra Swamiji, famous for predictions, has said that Karnataka will see sea of changes in coming days in political, social area. He has warned that there will be attack by terrorists, state will see natures' fury, political turmoils will be there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X