ಮಂಗಳೂರಿಗೆ ಹೊರಟಿದೆ ಅಡ್ವಾಣಿ ರಥಯಾತ್ರೆ
ಇದರಲ್ಲಿ ಮಂಗಳೂರು ಮತ್ತು ದಕ್ಷಿಣ ಕನ್ನಡದ ಪೊಲೀಸರನ್ನು ಹೊರತು ಪಡಿಸಿ ಎನ್.ಎಸ್.ಜಿ., ಕೆಎಸ್ಆರ್ಪಿ ಮತ್ತು ಮೈಸೂರು, ಶಿವಮೊಗ್ಗ, ಬೆಳಗಾವಿ ವಲಯ ವ್ಯಾಪ್ತಿಯ ಪೊಲೀಸ್ ಸಿಬಂದಿ ಒಳಗೊಂಡಿದ್ದಾರೆ. ದಿಲ್ಲಿಯಿಂದ ಎನ್.ಎಸ್.ಜಿ. ಸಿಬಂದಿ ಆಗಮಿಸಿದ್ದು, ವೇದಿಕೆಯನ್ನು ಸಂಪೂರ್ಣವಾಗಿ ಅವರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಬಾಂಬ್ ಪತ್ತೆ ದಳವನ್ನು ಕೂಡಾ ನಿಯೋಜಿಸಲಾಗಿದೆ.
ಅಡ್ವಾಣಿ ಅವರು ಸಂಚರಿಸುವ ಮಾರ್ಗದುದ್ದಕ್ಕೂ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಸಂಚಾರ ವ್ಯವಸ್ಥೆ ನಿಯಂತ್ರಣಕ್ಕಾಗಿ ಟ್ರಾಫಿಕ್ ಪೊಲೀಸರನ್ನು ಅಲ್ಲಲ್ಲಿ ನಿಯುಕ್ತಿಗೊಳಿಸಲಾಗಿದೆ. ಆಡ್ವಾಣಿ ಅವರ ಕಾರ್ಯಕ್ರಮದ ಕಾರಣಕ್ಕೆ ನಗರದಲ್ಲಿ ವಾಹನ ಸಂಚಾರದಲ್ಲಿ ವ್ಯಾಪಕ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ನಿರಾತಂಕವಾಗಿ ಸಂಚರಿಸುವಂತಿಲ್ಲ. ಮಂಗಳೂರು ನಗರದ ರಸ್ತೆಗಳಲ್ಲಿ ಪೊಲೀಸರೇ ಕಂಡುಬರುತ್ತಿದ್ದಾರೆ.
ನಗರದ ನೆಹರೂ ಕ್ರೀಡಾಂಗಣದಲ್ಲಿ ಅಡ್ವಾಣಿ ಬಹಿರಂಗ ಸಭೆ ನಡೆಸಲಿದ್ದಾರೆ. ಅವರ ಜೊತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಸದಾನಂದ ಗೌಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ವೇಳೆಗೆ ಉಡುಪಿಯಲ್ಲಿ ಆಡ್ವಾಣಿ ಕಾರ್ಯಕ್ರಮ ನಡೆಯಲಿದ್ದು ಅಲ್ಲೂ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.