ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಹೋರಾಟಕ್ಕೆ ಜೈ ಹೋ: ಅಡ್ವಾಣಿಗೆ ಸಿದ್ದು ಗುದ್ದು!

By Srinath
|
Google Oneindia Kannada News

advani-yatra-ridiculous-jai-ho-anna-says-siddaramaiah
ಬೆಂಗಳೂರು‌, ಅ. 30: ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ನಾವೂ ಬೆಂಬಲಿಸುತ್ತೇವೆ. ಗಾಂಧಿವಾದಿ ಅಣ್ಣಾ ಹಜಾರೆ ಅವರಂತಹ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಅಡ್ವಾಣಿಯ ಜನ ಚೇತನ ಯಾತ್ರೆಗೆ ಅಲ್ಲ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಜನಚೇತನ ಯಾತ್ರೆ ಕರ್ನಾಟಕದಲ್ಲಿ ಸಂಚರಿಸುವಾಗ ಅಡ್ವಾಣಿ ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧವೂ ಮಾತನಾಡಬೇಕು. ಇಡೀ ಸಚಿವ ಸಂಪುಟ ಭ್ರಷ್ಟ ಮಂತ್ರಿಗಳಿಂದ ಕೂಡಿದ್ದು, ಜೈಲನ್ನೇ ಪಕ್ಷದ ಕಚೇರಿಯನ್ನಾಗಿಸಿ ಕೊಂಡಿರುವ ಸರಕಾರದ ಆಡಳಿತ ವೈಖರಿ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಇಂತಹ ಭ್ರಷ್ಟ ಸರಕಾರ ಮುಂದುವರಿಯಬೇಕೋ ಅಥವಾ ಮನೆಗೆ ಹೋಗಬೇಕೋ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಸಿದ್ದು ಒತ್ತಾಯಿಸಿದರು.

ಸೋಮಣ್ಣಾನೂ ಜೈಲಿಗೆ - ಸಿದ್ದು ಭವಿಷ್ಯ: ಬಿಜೆಪಿ ಜೈಲನ್ನು ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಿದೆ. ಸರಕಾರದಲ್ಲಿ ಭ್ರಷ್ಟ ಮಂತ್ರಿಗಳು ತುಂಬಿದ್ದು, ಸದ್ಯದಲ್ಲೇ ಗೃಹಮಂತ್ರಿ ಆರ್. ಅಶೋಕ್, ಸಚಿವರಾದ ವಿ. ಸೋಮಣ್ಣ, ಸಿ.ಪಿ. ಯೋಗೇಶ್ವರ್, ಎಸ್.ಎ. ರಾಮದಾಸ್ ಮುಂತಾದವರೂ ಜೈಲಿಗೆ ಹೋಗಲಿದ್ದಾರೆ ಎಂದು ಅವರು ಸಿದ್ದರಾಮಯ್ಯ ಭವಿಷ್ಯ ನುಡಿದರು.

English summary
The Karnataka Congress Legislature Party Leader Siddaramaiah has ridiculed Advani Rath Yatra. But he says he supports Anna Hajare's fight against corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X